ಬಂಟ್ವಾಳ: ಬಿಜೆಪಿಯ ಇಬ್ಬರು ಮುಖಂಡರ ಮನೆಗೆ ತಹಶೀಲ್ದಾರ್‌, ಪೊಲೀಸ್‌ ನೇತೃತ್ವದ ತಂಡ ದಾಳಿ

ಸರಕಾರಿ ಕಾಮಗಾರಿಗೆ ಮಾತ್ರ ಬಳಸಬಹುದಾದ ಸಿಮೆಂಟ್ ವಶಕ್ಕೆ

Update: 2023-05-16 11:15 GMT

ಬಂಟ್ವಾಳ: ಸರಕಾರಿ ಕಾಮಗಾರಿಗೆ ಮಾತ್ರ ಬಳಸಬಹುದಾದ (ಮಾರಟ ಮಾಡಲು ಅವಕಾಶ ಇಲ್ಲದ) ಸಿಮೆಂಟ್ ನ್ನು ಮನೆ ಕಟ್ಟುಲು ಬಳಕೆ ಮಾಡುವ ಉದ್ದೇಶದಿಂದ ಸಿಮೆಂಟ್ ದಾಸ್ತಾನು ಇರಿಸಲಾಗಿದ್ದ ಜಾಗಕ್ಕೆ ಬಂಟ್ವಾಳ ತಹಶೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿ, ಸಿಮೆಂಟ್ ನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಿ ಬಳಿಕ ಹೆಚ್ಚಿನ ತನಿಖೆಗಾಗಿ ಬಂಟ್ವಾಳ ಪುರಸಭೆಗೆ ಪ್ರಕರಣವನ್ನು ನೀಡಿದ್ದಾರೆ.

ಪಲ್ಲಮಜಲು ನಿವಾಸಿ, ಬಿಜೆಪಿ ಮುಖಂಡ ಸೋಮಸುಂದರ ಕೆ‌. ಎಂಬಾತನ ಮನೆ ನಿರ್ಮಾಣಕ್ಕೆ ಮಾರಾಟಕ್ಕೆ ಅವಕಾಶವಿಲ್ಲದ 21 ಸಿಮೆಂಟ್ ಗೋಣಿ ಚೀಲಗಳು ಸ್ಥಳದಲ್ಲಿ ಹಾಗೂ ಖಾಲಿಯಾದ ಐದು ಗೋಣಿ ಸಿಮೆಂಟ್ ಚೀಲಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ತನಿಖೆ ಮುಂದುವರಿದಿದ್ದು, ಬಿಜೆಪಿಯ ಇನ್ನೋರ್ವ ಮುಖಂಡ ಡೊಂಬಯ್ಯ ಅರಳ ಎಂಬಾತನ ನಿವಾಸಕ್ಕೂ ತಹಶೀಲ್ದಾರ್ ನೇತೃತ್ವದ ತಂಡವು ದಾಳಿ ನಡೆಸಿದ್ದು, ಅಲ್ಲಿಂದಲೂ ಸಿಮೆಂಟ್ ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Similar News