ಬೆಂಗಳೂರು: ಯುವಕನ ಕೊಲೆ

Update: 2023-05-26 13:02 GMT

ಬೆಂಗಳೂರು, ಮೇ 26: ಲಾರಿ ಮಾರಾಟ ವಿಚಾರವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಇಲ್ಲಿನ ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ವಡ್ಡರದೊಡ್ಡಿ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ನಗರದ ಮಂಜು(27)ಕೊಲೆಯಾದ ಯುವಕ ಎಂದು ತಿಳಿದುಬಂದಿದೆ.

ಕೃತ್ಯನಡೆಸಿ ಪರಾರಿಯಾಗಿರುವ ಲಾರಿ ಮಾಲಕ ರವಿಪತ್ತೆಗೆ ತೀವ್ರ ಶೋಧ ನಡೆಸಲಾಗಿದೆ.ಕೊಲೆಯಾದ ಮಂಜು ಹಾಗೂ ಲಾರಿ ಮಾಲೀಕ ರವಿನಡುವೆ ಗಲಾಟೆ ನಡೆದು, ವ್ಯವಹಾರದ ವಿಚಾರವಾಗಿ ಇಬ್ಬರ ನಡುವೆ ಜಗಳ ಆಗಿತ್ತು.ಇದೇ ವಿಚಾರವಾಗಿ ಮಂಜು ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.ಸ್ಥಳಕ್ಕೆ ಬಿಡದಿ ಠಾಣೆ ಪೊಲೀಸರು ಧಾವಿಸಿ, ಪರಿಶೀಲನೆ ನಡೆಸಿದರು.

Similar News