ಎದುರುಪದವು: ಮಸೀದಿಗೆ ಪದಾಧಿಕಾರಿಗಳ ಆಯ್ಕೆ

Update: 2023-05-28 14:05 GMT

ಮಂಗಳೂರು, ಮೇ 28: ಮೂಡುಶೆಡ್ಡೆ ಸಮೀಪದ ಎದುರುಪದವು ಹಯಾತುಲ್ ಇಸ್ಲಾಂ ಬದ್ರಿಯ ಜುಮ್ಮಾ ಮಸೀದಿ ಮತ್ತು ಮದ್ರಸದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಡೆಯಿತು.

ಹಯಾತುಲ್ ಇಸ್ಲಾಂ ಬದ್ರಿಯ ಜುಮ್ಮಾ ಮಸೀದಿಯ ಖತೀಬ್ ಸಫ್ವಾನ್ ಇರ್ಫಾನಿ ಮುಂಡೋಳೆ ದುಆಗೈದರು. ಪ್ರಧಾನ ಕಾರ್ಯದರ್ಶಿ ಅಹ್ಮದ್ ಬಾವಾ ವಾರ್ಷಿಕ ಲೆಕ್ಕಪತ್ರ ಮಂದಿಸಿದರು. ಜೊತೆ ಕಾರ್ಯದರ್ಶಿ ಮುಹಮ್ಮದ್ ಆರೀಫ್ ವಾರ್ಷಿಕ ವರದಿ ವಾಚಿಸಿದರು.

2023-24ನೇ ಸಾಲಿನ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ಮಯ್ಯದ್ದಿ, ಉಪಾಧ್ಯಕ್ಷರಾಗಿ ಇಕ್ಬಾಲ್ ಎ.ಪಿ, ಕಾರ್ಯದರ್ಶಿಯಾಗಿ ಅಹ್ಮದ್ ಬಾವ, ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಆರೀಫ್, ಕೋಶಾಧಿಕಾರಿಯಾಗಿ ಮನ್ಸೂರ್, ಸದಸ್ಯರಾಗಿ ಸುಲೈಮಾನ್, ಸಾಜುದ್ದೀನ್, ಸಿರಾಜ್ ಮೋನು, ರಝಾಕ್ ಮಂದಾರ, ಮುಹಮ್ಮದ್ ಇಕ್ಬಾಲ್ ಸಿ.ಎಚ್, ಶಾಕೀರ್, ಸೈಫುದ್ದೀನ್, ಶೇಖ್ ಮೋನು ಆಯ್ಕೆಯಾಗಿದ್ದಾರೆ.

ಈ ಸಂದರ್ಭ ಮುಹಮ್ಮದ್ ಮುಕ್ರಿ, ಮಸೀದಿಯ ಮಾಜಿ ಅಧ್ಯಕ್ಷರಾದ ಹಾಜಿ ಮಹಮ್ಮದ್ ಹನೀಫ್, ಮಾಜಿ ಅಧ್ಯಕ್ಷ ಎಸ್ ಆಲಿಯಬ್ಬ, ಮುಹಮ್ಮದ್ ಶರೀಫ್, ಹಿರಿಯರಾದ ಹಾಜಿ ಹನೀಫ್ ಮೌಲವಿ ಮತ್ತಿತರರು ಉಪಸ್ಥಿತರಿದ್ದರು.

Similar News