ಮಂಗಳೂರು ಧರ್ಮ ಪ್ರಾಂತ ಸಿಟಿ ವಲಯದ ಚುನಾವಣೆ

Update: 2023-05-28 16:06 GMT

ಮಂಗಳೂರು : ಮಂಗಳೂರು ಧರ್ಮ ಪ್ರಾಂತದ ಸಿಟಿ ವಲಯದ ಕಾರ್ಯದರ್ಶಿ ಮತ್ತು ಪ್ರತಿನಿಧಿಗಳ ಹುದ್ದೆಗೆ ರವಿವಾರ ಕುಲಶೇಖರ ಚರ್ಚ್‌ನಲ್ಲಿ ಚುನಾವಣೆ ನಡೆಯಿತು.

ಸಿಟಿ ವಲಯದ 12 ಚರ್ಚ್‌ಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ವಾಮಂಜೂರು ಚರ್ಚ್ ಪ್ರಧಾನ ಗುರು ಫಾ. ಜೇಮ್ಸ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯದರ್ಶಿಯಾಗಿ ಕುಲಶೇಖರ ಚರ್ಚ್‌ನ ಅನಿಲ್ ಡೆಸಾ, ಪ್ರತಿನಿಧಿಗಳಾಗಿ ನೀರುಮಾರ್ಗ ಚರ್ಚ್‌ನ ಉಷಾ ಫೆರ್ನಾಂಡೀಸ್, ವಾಮಂಜೂರು ಚರ್ಚ್‌ನ ಚಾರ್ಲ್ಸ್ ಪಾಯಸ್ ಆಯ್ಕೆಯಾದರು. ಮಾಜಿ ಕಾರ್ಯದರ್ಶಿ ಸಂತೋಷ್ ಡಿಕೊಸ್ತಾ  ಸಹಕರಿಸಿದರು.

Similar News