ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಉದ್ಯೋಗಿ ಆತ್ಮಹತ್ಯೆ

Update: 2023-06-02 11:25 GMT

ಮಂಗಳೂರು, ಜೂ.2: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಉದ್ಯೋಗಿ ಕೀರ್ತನ್ ಕುಮಾರ್ (36) ಎಂಬವರು ಇಂದು ಮಧ್ಯಾಹ್ನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅನಾರೋಗ್ಯದಿಂದ ಬೇಸತ್ತ ಅವರು ಮುಡಾ ಕಚೇರಿ ಆವರಣದ ಕೋಣೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ವಿವಾಹಿತರಾಗಿದ್ದ ಅವರಿಗೆ ಪತ್ನಿ ಮತ್ತು ಮಗು ಇದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News