×
Ad

ಪರಿಷತ್ ಚುನಾವಣೆ: ಬಿಜೆಪಿಯಿಂದ ಸಂಚಾಲಕರ ನೇಮಕ

Update: 2025-10-28 21:44 IST

Photo credit: PTI

ಬೆಂಗಳೂರು : ವಿಧಾನ ಪರಿಷತ್‍ನ ನಾಲ್ಕು ಸ್ಥಾನಗಳ ಚುನಾವಣೆಗೆ ಪ್ರತಿಪಕ್ಷ ಬಿಜೆಪಿ ಸಿದ್ಧತೆ ಆರಂಭಿಸಿದ್ದು, ಈ ಸಂಬಂಧ ಸಂಚಾಲಕರು, ಸಹ ಸಂಚಾಲಕರನ್ನು ನೇಮಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ.

ಈಶಾನ್ಯ ಶಿಕ್ಷಕರ ಕ್ಷೇತ್ರ: ಸಂಚಾಲಕರಾಗಿ ಅಮರನಾಥ್ ಪಾಟೀಲ್, ಸಹ ಸಂಚಾಲಕರಾಗಿ ನವೀನ್ ಗುಳಗಣ್ಣನವರ್, ಪಶ್ಚಿಮ ಪದವೀಧರ ಕ್ಷೇತ್ರ: ಸಂಚಾಲಕರಾಗಿ ಅರುಣ್ ಶಹಾಪುರ, ಸಹ ಸಂಚಾಲಕರಾಗಿ ಸಂತೋಷ್‌ ದೇವರೆಡ್ಡಿ ಆಯ್ಕೆಯಾಗಿದ್ದಾರೆ.

ಆಗ್ನೇಯ ಪದವೀಧರ ಕ್ಷೇತ್ರ: ಸಂಚಾಲಕರಾಗಿ ವೈ.ಎ.ನಾರಾಯಣಸ್ವಾಮಿ, ಸಹ ಸಂಚಾಲಕರಾಗಿ ಚಿದಾನಂದ ಎಂ.ಗೌಡ, ಬೆಂಗಳೂರು ಶಿಕ್ಷಕರ ಕ್ಷೇತ್ರ : ಸಂಚಾಲಕರಾಗಿ ಕೇಶವ ಪ್ರಸಾದ್ ಮತ್ತು ಸಹ ಸಂಚಾಲಕರಾಗಿ ಎಸ್.ಎನ್.ರಾಜಣ್ಣ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News