×
Ad

ಬೆಂಗಳೂರು | ನೀರಿನ ಸಂಪ್‍ಗೆ ಬಿದ್ದು ಉಸಿರುಗಟ್ಟಿ ಕೂಲಿ ಕಾರ್ಮಿಕರಿಬ್ಬರು ಮೃತ್ಯು

Update: 2024-11-01 18:13 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ಸಿಹಿ ತಿಂಡಿಗಳ ಕಾರ್ಖಾನೆಯ ಇಬ್ಬರು ಕೂಲಿ ಕಾರ್ಮಿಕರು ನೀರಿನ ಸಂಪ್‍ಗೆ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ದಾಬಸ್‍ಪೇಟೆಯ ಕೆಂಗಲ್ ಕೆಂಪೋಹಳ್ಳಿಯಲ್ಲಿ ವರದಿಯಾಗಿದೆ.

ಕೆಂಗಲ್ ಕೆಂಪೋಹಳ್ಳಿಯ ಸ್ವೀಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮಧುಗಿರಿಯ ಲಿಂಗರಾಜು(27) ಹಾಗೂ ನವೀನ್ (27)ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಕೆಂಗಲ್ ಕೆಂಪೋಹಳ್ಳಿಯ ಸ್ವೀಟ್ಸ್ ಕಾರ್ಖಾನೆಯಲ್ಲಿ ನೀರು ಖಾಲಿಯಾಗಿದ್ದು, ನಿನ್ನೆ ಸಂಜೆ ಆವರಣದ ಸಂಪ್‍ನಲ್ಲಿ ನೀರು ಪರಿಶೀಲಿಸಲು ಯತ್ನಿಸಿದಾಗ ಬಿದ್ದು ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ದಾಬಸ್‍ಪೇಟೆ ಪೋಲೀಸರು ಪರಿಶೀಲನೆ ನಡೆಸಿ ಕಾರ್ಖಾನೆಯ ಮಾಲಕರಾದ ಮಯೂರ್ ಮತ್ತು ರಮೇಶ್ ವಿರುದ್ಧ ಪ್ರಕರಣ ದಾಖಲಿಸಿ, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News