×
Ad

ಪತ್ರಕರ್ತ ವೆಂಕಟೇಶ ಸಂಪಗೆ ʼಕಾವ್ಯಶ್ರೀ ರಾಜ್ಯೋತ್ಸವ ಪ್ರಶಸ್ತಿʼ ಪ್ರದಾನ

Update: 2024-11-03 18:50 IST

ಬೆಂಗಳೂರು : ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ (ರಿ) ನೀಡುವ ರಾಜ್ಯ ಮಟ್ಟದ ʼಕಾವ್ಯಶ್ರೀ ರಾಜ್ಯೋತ್ಸವʼ ಪ್ರಶಸ್ತಿಯನ್ನು ಸಂಪದ ಸಾಲು ಪತ್ರಿಕೆ ಸಂಪಾದಕ, ವೆಂಕಟೇಶ ಎಸ್ ಸಂಪಗೆ ಇಂದು(ನ.3) ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಪ್ರದಾನ ಮಾಡಲಾಯಿತು.

ವೆಂಕಟೇಶ ಸಂಪ ಅವರು ಕಳೆದ 17 ವರ್ಷಗಳಿಂದ ಸಂಪದ ಸಾಲು ಪತ್ರಿಕೆ ನಡೆಸುತ್ತಿದ್ದು, ಅವರ ಕತೆ, ಕವನ, ಲೇಖನಗಳು ರಾಜ್ಯದ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಪ ಅವರು ಟಿವಿ, ರೇಡಿಯೋಗಳಲ್ಲಿ ಕಾರ್ಯಕ್ರಮಗಳನ್ನು ನೆಡೆಸಿಕೊಟ್ಟಿದ್ದು, ಸಿನಿಮಾ ಧಾರವಾಹಿಗಳಲ್ಲಿ ನಟಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಡಾ.ಆರೂಢ ಭಾರತೀ ಸ್ವಾಮಿಗಳು, ಡಾ.ಎಸ್.ರಾಮಲಿಂಗೇಶ್ವರ, ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಜಿ.ಶಿವಣ್ಣ, ಚಂದ್ರಶೇಖರ ಮಾಡಲಗೇರಿ, ಶಾಂತಿ ವಾಸು, ಸಾಹಿತಿ ಸುಬ್ಬು ಹೊಲೆಯಾರ್, ವಾದಿರಾಜ್, ಮಹೇಂದ್ರ ಮುನ್ನೋಟಾ ಇತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News