×
Ad

23 ವರ್ಷದ ಬಳಿಕ ರಾಜ್ಯದಲ್ಲಿ ಭಾರತೀಯ ಸಭಾಧ್ಯಕ್ಷರ ಸಮ್ಮೇಳನ : ಯು.ಟಿ.ಖಾದರ್

Update: 2025-05-02 22:32 IST

ಬೆಂಗಳೂರು : 23 ವರ್ಷಗಳ ಬಳಿಕ ರಾಜ್ಯದಲ್ಲಿ ಅಖಿಲ ಭಾರತೀಯ ಸಭಾಧ್ಯಕ್ಷರ ಸಮ್ಮೇಳನವನ್ನು ಆಯೋಜಿಸಲಾಗುತ್ತಿದ್ದು, ಸೆ.9 ರಿಂದ ಮೂರು ದಿನಗಳವರೆಗೂ ನಡೆಯಲಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 23 ವರ್ಷಗಳ ಬಳಿಕ ರಾಜ್ಯದಲ್ಲಿ ಸಮ್ಮೇಳನ ನಡೆಲಾಗುತ್ತಿದೆ. ಅದರಂತೆ ಸೆ.8ರಂದು ಸಂಜೆ ಸಮ್ಮೇಳನವನ್ನು ವಿಧಾನಸೌಧ ಭವ್ಯಮೆಟ್ಟಿಲುಗಳ ಮೇಲೆ ಉದ್ಘಾಟನಾ ಸಮಾರಂಭವನ್ನು ಆಯೋಜಿಸುವ ಉದ್ದೇಶವನ್ನು ಹೊಂದಲಾಗಿದೆ. 9 ಮತ್ತು 10ರಂದು ಎರಡು ದಿನಗಳ ನಡೆಯುವ ಸಮಾವೇಶದಲ್ಲಿ ಎಲ್ಲಾ ರಾಜ್ಯಗಳ ಸಭಾಧ್ಯಕ್ಷರು, ಉಪಸಭಾಧ್ಯಕ್ಷರು, ಸಭಾಪತಿಗಳು, ಉಪಸಭಾಪತಿಗಳು, ಅಧಿಕಾರಿಗಳು ಸೇರಿದಂತೆ 500ಕ್ಕೂಹೆಚ್ಚು ಮಂದಿ ಭಾಗಿಯಾಗಿಯಾಗುವ ನಿರೀಕ್ಷೆ ಇದೆ ಎಂದರು.

ಅದೇ ರೀತಿ, ಸೆ.11ರಂದು ಪ್ರತಿನಿಧಿಗಳನ್ನು ರಾಜ್ಯದ ಐತಿಹಾಸಿಕ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಗುವುದು ಎಂದ ಅವರು, ರಾಜ್ಯದಲ್ಲಿ ಸಮ್ಮೇಳನ ಆಯೋಜಿಸುವಂತೆ ಕೋರಿ ಲೋಕಸಭಾ ಸಭಾಧ್ಯಕ್ಷರಿಗೆ ಪತ್ರ ಬರೆಯಲಾಗಿತ್ತು. ಅವರು ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಅಖಿಲ ಭಾರತೀಯ ಸಭಾಧ್ಯಕ್ಷ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದು ಉಲ್ಲೇಖಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News