Bidar | ರಸ್ತೆ ಅಪಘಾತ: ಬೈಕ್‌ ಸವಾರ ಮೃತ್ಯು

Update: 2026-07-22 20:08 IST

ಸಂತೋಷ್ ಜಾಪುರೆ

ಬೀದರ್: ಇಕೋ ವ್ಯಾನ್ ಮತ್ತು ಬೈಕ್‌ ನಡುವೆ ಢಿಕ್ಕಿ ಸಂಭವಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಗರದ ಮಹಾವೀರ್ ವೃತ್ತದ ಬಳಿ ಬುಧವಾರ ಸಂಭವಿಸಿದೆ.

ನಗರದ ಸಾಯಿ ಕಾಲೊನಿ ನಿವಾಸಿ ಸಂತೋಷ್ ಜಾಪುರೆ (48) ಮೃತಪಟ್ಟವರು.

ಬೈಕ್‌ ನಲ್ಲಿ ಹೋಗುತ್ತಿದ್ದ ಸಂತೋಷ್ ಅವರಿಗೆ ವ್ಯಾನ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಬೈಕ್‌ ಸವಾರ ಸಂತೋಷ್‌ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಈ ಘಟನೆಯು ಮಾರ್ಕೇಟ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News