×
Ad

ಚಾಮರಾಜನಗರ : ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಮರಿಯಾನೆ ಕಳೇಬರ ಪತ್ತೆ

Update: 2025-07-03 09:00 IST

ಚಾಮರಾಜನಗರ :  ಹನೂರು ತಾಲೂಕಿನ ರಾಮಾಪುರ ಅರಣ್ಯ ವಲಯದ ರಾಮಾಪುರ ಬೀಟ್ ನ ಹುಣಸೆ ಬೈಲು ಅರಣ್ಯ ಪ್ರದೇಶದಲ್ಲಿ ಮರಿಯಾನೆಯೊಂದರ ಕಳೇಬರ ಪತ್ತೆಯಾಗಿರುವ ಘಟನೆ ವರದಿಯಾಗಿದೆ.

ಅರಣ್ಯ ಸಿಬ್ಬಂದಿ ಗಸ್ತು ನಡೆಸುವಾಗ ಆನೆ ಕಳೇಬರ ಕಂಡುಬಂದಿದ್ದರಿಂದ ಘಟನೆ ಬೆಳಕಿಗೆ ಬಂದಿದೆ.

ಮೃತ ಹೆಣ್ಣಾನೆಮರಿಗೆ 8-10 ವರ್ಷಗಳಾಗಿದ್ದು ಪಶು ವೈದ್ಯ ಡಾ.ಶಿವರಾಜು ಮೃತ ಆನೆಮರಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿ ಸಹಜ ಸಾವೆಂದು ದೃಢಪಡಿಸಿದ್ದಾರೆ ಎಂದು ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆ ಬಳಿಕ ಮಾರ್ಗಸೂಚಿ ಅನುಸಾರವಾಗಿ ಆನೆ ಕಳೇಬರವನ್ನು ಸುಡಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News