ಚಾಮರಾಜನಗರ: ಕಾರು ಅಪಘಾತ; ಅಪಾಯದಿಂದ ಪಾರಾದ ಕೊಳ್ಳೇಗಾಲ ಶಾಸಕ

Update: 2024-04-25 06:39 GMT

ಚಾಮರಾಜನಗರ: ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್ ಕೃಷ್ಷಮೂರ್ತಿ ಅವರು ಸಂಚರಿಸುತ್ತಿದ್ದ ಕಾರಿನ ಟೈರ್ ಬ್ಲಾಸ್ಟ್ ಆದ ಪರಿಣಾಮ ಕಾರು ಅಪಘಾಕ್ಕೊಳಗಾದ ಘಟನೆ ಬುಧವಾರ ರಾತ್ರಿ ನಡೆದಿದೆ.

ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ಸಂಬಂಧ ಮತ ಪ್ರಚಾರ ನಡೆಸಿ ರಾತ್ರಿ ಮೈಸೂರಿನ ಮನೆಗೆ ಹಿಂತಿರುವಾಗ ಆಕಸ್ಮಿಕವಾಗಿ ಟೈರ್ ಬ್ಲಾಸ್ಟ್ ಆಗಿದೆ.

 ಕಾರಿನಲ್ಲಿದ್ದ ಶಾಸಕ ಎ.ಆರ್. ಕೃಷ್ಣಮೂರ್ತಿ, ಆಪ್ತ ಸಹಾಯಕ ಚೇತನ್ ಹಾಗೂ ಚಾಲಕ ಸರೀಶ್ ಅವರು  ಅಪಾಯದಿಂದ ಪಾರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News