×
Ad

ಚಾಮರಾಜನಗರ | ಜೇನುನೊಣ ದಾಳಿಗೆ ರೈತ ಬಲಿ

Update: 2024-05-20 17:38 IST

ತುಳಸಿದಾಸ್ (45)

ಚಾಮರಾಜನಗರ : ಜೇನುನೊಣ ದಾಳಿಯಿಂದ ರೈತನೊಬ್ಬ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬೆಳ್ಳತ್ತೂರು ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಮೃತ ರೈತನನ್ನು ಬೆಳ್ಳತ್ತೂರು ಗ್ರಾಮದ ತುಳಸಿದಾಸ್ (45) ಎಂದು ಗುರುತಿಸಲಾಗಿದೆ. ಸೋಮವಾರ ಮದ್ಯಾಹ್ನ ತುಳಸಿ ದಾಸ್ ಹಾಗೂ ಪತ್ನಿ ಆಶಾ ಜೊತೆಗೂಡಿ ತಮ್ಮ ಜಮೀನಿನಲ್ಲಿ ಜೋಳದ ಫಸಲಿಗೆ ಔಷದಿ ಸಿಂಪಡಿಸುತ್ತಿದ್ದಾಗ ದಿಢೀರ್ ಹೆಜ್ಜೇನು ದಾಳಿ ನೆಡೆಸಿದೆ ಎನ್ನಲಾಗಿದೆ. ಈ ವೇಳೆ ದಾಳಿಯಿಂದ ತುಳಸಿದಾಸ್ ಸ್ಥಳದಲ್ಲೇ ಮೃತಪಟ್ಟರೆ, ಪತ್ನಿ ಆಶಾ ಕೂಡ ಹೆಜ್ಜೇನು ದಾಳಿಯ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News