ಹಾರ್ಮುಝ್ನಲ್ಲಿ ನೌಕೆಗಳ ಮೇಲೆ ದಾಳಿಗೆ ವಿಶ್ವಸಂಸ್ಥೆಯಲ್ಲಿ ಭಾರತ ಕಳವಳ
Update: 2026-05-17 23:08 IST
Photo Credit: ANI
ವಿಶ್ವಸಂಸ್ಥೆ, ಮೇ 17: ಹಾರ್ಮುಝ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸುವುದು, ನಾಗರಿಕ ಸಿಬ್ಬಂದಿಗಳಿಗೆ ಅಪಾಯ ಉಂಟುಮಾಡುವುದು ಮತ್ತು ನೌಕಾಯಾನ ಸ್ವಾತಂತ್ರ್ಯವನ್ನು ತಡೆಯುವುದು ಸ್ವೀಕಾರಾರ್ಹವಲ್ಲ ಎಂದು ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ಹೇಳಿದ್ದಾರೆ.
ಇಂಧನ ಮತ್ತು ಪೂರೈಕೆ ಹರಿವುಗಳನ್ನು ರಕ್ಷಿಸುವ ಬಗ್ಗೆ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಸಮಿತಿಯ ನೇತೃತ್ವದಲ್ಲಿ ನಡೆದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು. ಬಿಕ್ಕಟ್ಟನ್ನು ಪರಿಹರಿಸಲು ಅಂತರರಾಷ್ಟ್ರೀಯ ಸಹಕಾರದೊಂದಿಗೆ ಅಲ್ಪಾವಧಿಯ ಮತ್ತು ರಚನಾತ್ಮಕ ಕ್ರಮಗಳ ಸಂಯೋಜನೆ ಅತ್ಯಗತ್ಯವಾಗಿದೆ. ನೌಕಾಯಾನ ಸ್ವಾತಂತ್ರ್ಯದ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಕಾನೂನನ್ನು ಸಂಪೂರ್ಣವಾಗಿ ಗೌರವಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.