Chitapur | ಮಹಿಳೆಯರ ಶಕ್ತಿಯಿಂದ ದೇಶದ ಅಭಿವೃದ್ಧಿ: ಸೋಮಶೇಖರ ಶಿವಾಚಾರ್ಯ
ಚಿತ್ತಾಪುರ: ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶೇಷ ಗೌರವ ನೀಡಲಾಗಿದ್ದು, ಮಹಿಳೆಯರಿಗೆ ಉಡಿ ತುಂಬುವ ಸಂಪ್ರದಾಯವು ಕುಟುಂಬ ಹಾಗೂ ಸಮಾಜದ ಸಮಗ್ರ ಅಭಿವೃದ್ಧಿಯ ಸಂಕೇತವಾಗಿದೆ ಎಂದು ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ಹೇಳಿದರು.
ಪಟ್ಟಣದ ಶ್ರೀ ಶಿವಶಂಕರ ಮಠದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಗುರುಪಾದ ಪೂಜೆ ಅಂಗವಾಗಿ ಆಯೋಜಿಸಿದ್ದ ವರಮಹಾಲಕ್ಷ್ಮೀ ವೈಭವ ಸಮಾರಂಭದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮುತೈದಿ ಮಹಿಳೆಯರ ಶಕ್ತಿ ಅಪಾರವಾಗಿದ್ದು, ಸ್ವಾಮಿಗಳ ಶಕ್ತಿಗಿಂತಲೂ ಮಹಿಳೆಯರ ಶಕ್ತಿ ದೊಡ್ಡದು. ಮಹಿಳೆಯರು ಕುಟುಂಬ ಹಾಗೂ ಸಮಾಜದ ಒಳಿತಿಗಾಗಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ದೇಶದಲ್ಲಿ ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಬೇಕು. ಉತ್ತಮ ಮಳೆ-ಬೆಳೆಯಾಗಿ ಪ್ರತಿಯೊಬ್ಬರ ಆರ್ಥಿಕ ಸ್ಥಿತಿ ಸುಧಾರಿಸಬೇಕು ಎಂದು ಮಹಿಳೆಯರು ಪ್ರಾರ್ಥಿಸಬೇಕು ಎಂದು ಹೇಳಿದರು.
ಗುರುವಿನ ಪಾದದಲ್ಲಿ ಅಪಾರ ಶಕ್ತಿಯಿದ್ದು, ಗುರುವಿನ ಸೇವೆ ಮಾಡುವುದರಿಂದ ಮನುಷ್ಯನ ಜೀವನದಲ್ಲಿನ ಸಂಕಷ್ಟಗಳು ದೂರವಾಗುತ್ತವೆ ಎಂದು ಶ್ರೀಗಳು ತಿಳಿಸಿದರು.
ತೆಲಂಗಾಣದ ಕೌಳಸ ಗ್ರಾಮದ ಹಿರೇಮಠದ ಶ್ರೀ ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಚಿತ್ತಾಪುರ-ಸೇಡಂ ಶ್ರೀ ಶಿವಶಂಕರ ಮಠದ ಶಿವಶಂಕರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.
ಶಿವಶರಣಯ್ಯಸ್ವಾಮಿ ಪುರದಯ್ಯನಮಠ, ಕರಬಸಯ್ಯ ಶಾಸ್ತ್ರೀ ಹಾಗೂ ಶಿವಕುಮಾರ ಹಿರೇಮಠ ಮಂತ್ರ ಪಠಣ ನೆರವೇರಿಸಿದರು. ರೇಣುಕಾ–ರಾಜು ಸಂಕನೂರ ದಂಪತಿ ಉಡಿ ತುಂಬುವ ಸೇವೆ ಸಲ್ಲಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕ ಘಟಕದ ಅಧ್ಯಕ್ಷ ನಾಗರಾಜ ಭಂಕಲಗಿ, ಮುಖಂಡರಾದ ಮಲ್ಲಣ್ಣ ಮಾಸ್ತರ, ಶಿವಶರಣಪ್ಪ ರೇಷ್ಮಿ, ರವೀಂದ್ರ ಸಜ್ಜನಶೆಟ್ಟಿ, ವೀರಭದ್ರಪ್ಪ ಹುಮನಾಬಾದ, ಬಸವರಾಜ ಹೂಗಾರ, ಚಂದ್ರಶೇಖರ ಉಟಗೂರ, ಸೋಮಶೇಖರ ಯದಲಾಪುರ, ರಾಜಶೇಖರ ಬಳ್ಳಾ, ರವೀಂದ್ರ ಗೊಬ್ಬರ, ಮಹೇಶ ರೇಷ್ಮಿ, ಸಂಗಮೇಶ ರೋಣದ, ಬಸವರಾಜ ಸಂಕನೂರ, ಶರಣಗೌಡ ಮುದನೂರ, ವಾಸುದೇವ ಗಂಜಿ, ಮಹಾದೇವ ಅಂಗಡಿ, ದೇವಿಂದ್ರ ಸಜ್ಜನಶೆಟ್ಟಿ, ಶಿವುಕುಮಾರ ಗೊಬ್ಬರ, ಶರಣು ಸೂಲಹಳ್ಳಿ, ಮಲ್ಲಿಕಾರ್ಜುನ ಪಲ್ಲೇದ, ಅಂಬರೇಶ ಸುಲೇಗಾಂವ, ರಾಜಶೇಖರ ಮುಡಬೂಳ, ರಮೇಶ ಮತಕುಂಟಿ, ಬಸವರಾಜ ಬೊಮ್ಮನಳ್ಳಿ, ವೆಂಕಟಮ್ಮ ಪಾಲಪ್, ನಾಗಮ್ಮ ರೇಷ್ಮಿ, ಸರಸ್ವತಿ ರೇಷ್ಮಿ, ಮಂಜುಳಾ ಇಟಗಿ, ಸಂಗೀತಾ ಕೊಲ್ಲೂರ, ಭುವನೇಶ್ವರಿ ಸಿಂಪಿ, ಲಲಿತಾ ರೇಷ್ಮಿ, ಉಮಾದೇವಿ ಕೊಲ್ಲೂರ ಸೇರಿದಂತೆ ಇತರರು ಇದ್ದರು.