ಕಲಬುರಗಿ : ಮದ್ಯವ್ಯಸನದಿಂದ ಮುಕ್ತರಾಗಲು ಮನ ಪರಿವರ್ತನೆಯ ಜೊತೆಗೆ ದೃಢಸಂಕಲ್ಪ ಅತ್ಯಗತ್ಯ. ಶಿಬಿರದಲ್ಲಿ ಪಡೆದ ಅರಿವು ಮತ್ತು ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಲು ಸಾಧ್ಯವಾಗುತ್ತದೆ ಎಂದು ಶರಣಪ್ಪ ಸಲಾದಪುರ ಹೇಳಿದರು.

ಕಮಲಾಪುರ ತಾಲೂಕಿನಲ್ಲಿ ಆಯೋಜಿಸಲಾಗಿದ್ದ 2113ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ನವಜೀವನ ಸಮಿತಿ ಸದಸ್ಯರಿಗೆ ದಾಖಲಾತಿಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು.

ಮದ್ಯವ್ಯಸನಿಗಳು ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಿ, ಮದ್ಯಮುಕ್ತರಾಗಿ ನೆಮ್ಮದಿಯ ಬದುಕು ಸಾಗಿಸಬೇಕು ಎಂದು ಶುಭ ಹಾರೈಸಿದ ಅವರು, ಎಂಟು ದಿನಗಳ ಶಿಬಿರದಲ್ಲಿ ಪಡೆದ ಮನ ಪರಿವರ್ತನೆ, ಮಾರ್ಗದರ್ಶನ ಮತ್ತು ಆತ್ಮವಿಶ್ವಾಸವನ್ನು ಜೀವನದಲ್ಲಿ ಅಳವಡಿಸಿಕೊಂಡು ಹೊಸ ಜೀವನದತ್ತ ಹೆಜ್ಜೆ ಇಡಬೇಕು ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಯಶ್ರೀ ಮತ್ತಿಮೂಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯೋಜನೆಯ ನಿರ್ದೇಶಕರಾದ ಗಣಪತಿ ಮಾಳಜಿ, ಸಿ.ಎನ್. ಬಾಬಾಳಗಾಂವ, ಅನಿಲಕುಮಾರ್ ಡಾಗೆ, ರವಿಕುಮಾರ್ ನಿಲೂರ, ಅಣ್ಣಪ್ಪ ಜಮಾದಾರ, ದಾಸಿಮಯ್ಯ ವಡ್ಡನಕೇರಿ, ಶಿವಕುಮಾರ್ ಮರತೂರ, ಶಿವರುದ್ರಪ್ಪ ಮಾಟೂರ, ರಮೇಶ ಕೋರಿ, ಸಾಬಯ್ಯಾ ರತ್ನಾಕರ, ವಿರೇಶ್ ಜಮಾದಾರ, ಚಂದ್ರಕಾಂತ್ ಜಮಾದಾರ, ರವೀಂದ್ರ ಬಿ.ಕೆ., ಚಂದ್ರಕಾಂತ್, ಸೂರ್ಯಕಾಂತ್ ಸೇರಿದಂತೆ ಶಿಬಿರಾಧಿಕಾರಿಗಳು, ಆರೋಗ್ಯ ಸಹಾಯಕರು, ಮೇಲ್ವಿಚಾರಕರಾದ ಜ್ಞಾನಪ್ಪ ಕಂಬಳಿ, ಸೇವಾ ಪ್ರತಿನಿಧಿಗಳು, ನವಜೀವನ ಸಮಿತಿ ಸದಸ್ಯರು ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor