ಕುಣಿಯ | ಸಮಸ್ತ ನೂರನೇ ವಾರ್ಷಿಕ ಅಂತರರಾಷ್ಟ್ರೀಯ ಮಹಾ ಸಮ್ಮೇಳನ : ಶಿಬಿರದ ಛಾವಣಿಗೆ ಶಿಲಾನ್ಯಾಸ
ಕುಣಿಯ(ಕಾಸರಗೋಡು): ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ನೂರನೇ ವಾರ್ಷಿಕ ಅಂತರರಾಷ್ಟ್ರೀಯ ಮಹಾಸಮ್ಮೇಳನದ ಭಾಗವಾಗಿ ಕುಣಿಯದಲ್ಲಿ ನಿರ್ಮಿಸಲಾಗುತ್ತಿರುವ ಶಿಬಿರದ ಛಾವಣಿಗೆ ಸಮಸ್ತ ಅಧ್ಯಕ್ಷರಾದ ಸೈಯದುಲ್ ಉಲಮಾ ಸೈಯದ್ ಜಿಫ್ರಿ ಮುತ್ತುಕ್ಕೋಯ ತಂಙಳ್ ಶಿಲಾನ್ಯಾಸ ಕಾರ್ಯ ನೆರವೇರಿಸಿದರು.
2026ರ ಫೆ.4ರಿಂದ 8ರವರೆಗೆ ನಡೆಯುವ ಐತಿಹಾಸಿಕ ಮಹಾಸಮ್ಮೇಳನದ ಸಿದ್ಧತೆಗಳು ಭರದಲ್ಲಿ ನಡೆಯುತ್ತಿದ್ದು, ನಿನ್ನೆ ಮಧ್ಯಾಹ್ನ ಪ್ರಸ್ತುತ ಸಮಾರಂಭದಲ್ಲಿ ಅಧಿಕೃತವಾಗಿ ಶಿಬಿರದ ಛಾವಣಿ ನಿರ್ಮಾಣಕ್ಕೆ ಚಾಲನೆ ದೊರೆಯಿತು. ಈ ಮಹಾಸಮ್ಮೇಳನವನ್ನು ಇತಿಹಾಸವಾಗಿ ಮಾರ್ಪಾಡಿಸಲು ಎಲ್ಲರೂ ಪ್ರಾರ್ಥಿಸಬೇಕು ಎಂದು ಸಮಸ್ತ ಅಧ್ಯಕ್ಷರಾದ ಸಯ್ದುಲ್ ಉಲಮಾ ಸೈಯದ್ ಜಿಫ್ರೀ ಮುತ್ತುಕ್ಕೋಯ ತಂಙಳ್ ಕರೆ ನೀಡಿದರು.
ವರಕ್ಕಲ್ ಮುಲ್ಲಕ್ಕೋಯ ತಂಙಳ್ ನಗರದಲ್ಲಿ ನಿರ್ಮಾಣವಾಗುತ್ತಿರುವ ಈ ಶಿಬಿರ ಛಾವಣಿಯು 33,313 ಶಿಬಿರಾರ್ಥಿಗಳಿಗೆ ವಸತಿ ಹಾಗೂ ಶಿಬಿರ ವೀಕ್ಷಣೆಯ ವ್ಯವಸ್ಥೆ ಒದಗಿಸಲಿದ್ದು, ಇದು ದೇಶದಲ್ಲೇ ಅತ್ಯಂತ ದೊಡ್ಡ ಸೌಲಭ್ಯವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಸ್ತ ಕಾರ್ಯದರ್ಶಿ ಎಂ.ಟಿ. ಅಬ್ದುಲ್ಲಾ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದರು. ಸಮಸ್ತ ಜನರಲ್ ಮ್ಯಾನೇಜರ್ ಕೆ. ಮೊಯೀನುಕುಟ್ಟಿ ಮಾಸ್ಟರ್ ಮುನ್ನುಡಿ ಭಾಷಣ ನಿರ್ವಹಿಸಿದರು. ಅಬ್ದುಸ್ಸಲಾಂ ದಾರಿಮಿ ಆಲಂಪಾಡಿ ಸ್ವಾಗತಿಸಿದರು.
ಪ್ರಸ್ತುತ ಸಮಾರಂಭದಲ್ಲಿ ಕೆ. ಉಮರ್ ಫೈಝಿ ಮುಕ್ಕಂ, ಎ.ವಿ. ಅಬ್ದುರ್ರಹ್ಮಾನ್ ಮುಸ್ಲಿಯಾರ್, ಬಿ.ಕೆ. ಅಬ್ದುಲ್ ಖಾದಿರ್ ಮುಸ್ಲಿಯಾರ್ ಬಂಬ್ರಾಣ, ಉಸ್ಮಾನ್ ಫೈಝಿ ತೋಡಾರು, ಎನ್.ಎ. ನೆಲ್ಲಿಕ್ಕುನ್ನು ಎಂಎಲ್ಎ, ಎಂ.ಎಸ್. ತಂಙಳ್ ಮದನಿ, ಟಿಪಿಸಿ ತಂಙಳ್, ಶುಹೈಬ್ ತಂಙಳ್, ಇಸ್ಮಾಯಿಲ್ ಕುಂಞಿ ಹಾಜಿ, ಚೆಂಗಳ ಅಬ್ದುಲ್ಲಾ ಫೈಝಿ ಸೇರಿದಂತೆ ಹಲವಾರು ಉಲಮಾ ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕುಣಿಯದಲ್ಲಿ ನಡೆಯಲಿರುವ ಸಮಸ್ತ ನೂರನೇ ವಾರ್ಷಿಕ ಅಂತಾರಾಷ್ಟ್ರೀಯ ಮಹಾಸಮ್ಮೇಳನವು ಜಾಗತಿಕವಾಗಿ ಗಮನ ಸೆಳೆಯುವ ಭವ್ಯ ಸಂಗಮವಾಗಲಿದೆ ಎಂದು ಸಮಸ್ತ ನೇತಾರರು ತಿಳಿಸಿದ್ದಾರೆ.