×
Ad

ಕಾಸರಗೋಡು ಮೂಲದ ಸಿನಿಮಾ ನಿರ್ದೇಶಕನ ಪುತ್ರ ಬೆಂಗಳೂರಿನಲ್ಲಿ ಆತ್ಮಹತ್ಯೆ

Update: 2025-11-18 12:38 IST

ಕಾಸರಗೋಡು : ಸಿನಿಮಾ ನಿರ್ದೇಶಕ ಹಾಗೂ ಚೆನ್ನೈಯಲ್ಲಿ ಪತ್ರಕರ್ತನಾಗಿರುವ ಕಾಸರಗೋಡು ಮೂಲದ ಪ್ರಶಾಂತ್ ಕಾನತ್ತೂರ್ ಅವರ ಪುತ್ರ ಅನಿರುದ್ಧ್ ಯಾನೆ ಕಣ್ಣನ್ (22) ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಕಂಪ್ಯೂಟರ್ ಗೇಮ್ ಡಿಸೖನಿಂಗ್ ನಲ್ಲಿ ವಿಶೇಷ ಪರಿಣತಿ ಹೊಂದಿದ್ದ ಕಣ್ಣನ್, ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಕಂಪ್ಯೂಟರ್ ಗೇಮ್ಸ್ ಡಿಸೖನರ್ ಆಗಿ ವೃತ್ತಿಗೆ ಇತ್ತೀಚೆಗಷ್ಟೇ ಸೇರಿಕೊಂಡಿದ್ದ. ಕಳೆದೆರಡು ದಿನಗಳಿಂದ ಉದ್ಯೋಗಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳು ಬಾಡಿಗೆ ಮನೆ ಗೆ ಬಂದು ಪರಿಶೀಲಿಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ವಿಷಯ ತಿಳಿದು ಕುಟುಂಬಸ್ಥರು  ಬೆಂಗಳೂರಿಗೆ ತೆರಳಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News