10ನೇ ಆವೃತ್ತಿಯ ಮೇ ಸಾಹಿತ್ಯ ಮೇಳ ಕೊಪ್ಪಳದಲ್ಲಿ ನಡೆಯಲಿದೆ : ಬಸವರಾಜ ಸೂಳಿಭಾವಿ

Update: 2024-02-05 17:30 GMT

ಕೊಪ್ಪಳ : 2024ರ ಮೇ ಸಾಹಿತ್ಯ ಮೇಳವೂ ಮೇ ತಿಂಗಳ 25,26ರಂದು ಕೊಪ್ಫಳದಲ್ಲಿ ನಡೆಯಲಿದೆ ಎಂದು  ಬಸವರಾಜ ಸೂಳಿಭಾವಿ ತಿಳಿಸಿದ್ದಾರೆ.

ಫೆ.4 ರಂದು ಕೊಪ್ಪಳದಲ್ಲಿ ನಡೆದ ಮೇ ಸಾಹಿತ್ಯ ಮೇಳದ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಅಲ್ಲಮಪ್ರಭು ಬೆಟ್ಟದೂರ ಮಾತನಾಡಿ, “ಇದೀಗ ಸಂದಿಗ್ಧ ಸಂದರ್ಭದಲ್ಲಿ ನಾವೆಲ್ಲ ಸೇರಿ ಈ ಮೇ ಸಾಹಿತ್ಯ ಮೇಳವನ್ನು ಸಂಘಟಿಬೇಕಿದೆ. ಕೋಮುವಾದಿ ರಾಜಕಾರಣ ವ್ಯಾಪಕವಾಗಿ ಬೆಳೆಯುತ್ತಿರುವಾಗ ಸೌಹಾರ್ದ ಬೆಸೆಯುವ ಇಂಥ ಮೇಳವು ಕೊಪ್ಪಳ ಜಿಲ್ಲೆಗೆ ಅಗತ್ಯವಾಗಿದೆ. ಅಂಜನಾದ್ರಿ ಹೆಸರಿನಲ್ಲಿ ಕೋಮು ಸಂಘಟನೆಗಳು ಯುವಕರನ್ನು ಗುರಿಯಾಗಿಸಿಕೊಂಡು ಹೆಚ್ಚು ಕೆಲಸ ಮಾಡುತ್ತಾ ಕೊಪ್ಫಳ ಜಿಲ್ಲೆಯನ್ನು ವಿಸ್ತರಿಸಲು ಹೊರಟಿದೆ. ಹಾಗಾಗಿ ಪ್ರಗತಿಪರರು, ಹೋರಾಟಗಾರರು, ಚಿಂತಕರು ಎಲ್ಲಾ ಸೇರಿ ಸಂವಿಧಾನವನ್ನು ಉಳಿಸುವ ಭಾಗವಾಗಿ, 10ನೇ ಆವೃತ್ತಿಯ ಮೇ ಸಾಹಿತ್ಯ ಮೇಳವನ್ನು ಕೊಪ್ಪಳದಲ್ಲಿ ಮಾಡಬೇಕಿದೆ” ಎಂದು ತಿಳಿಸಿದರು.

ಈ ಸಭೆಯಲ್ಲಿ 60 ಕ್ಕೂ ಹೆಚ್ಚು ಜನ ಸಾಹಿತಿಗಳು, ಪ್ರಗತಿಪರ ಚಿಂತಕರು, ಹೋರಾಟಗಾರರು, ಸಂಘಟಿಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News