ಕೊಪ್ಪಳ: ದೇವಸ್ಥಾನದ ಹುಂಡಿ ಕಳ್ಳತನ
Update: 2026-01-05 09:51 IST
ಕನಕಗಿರಿ: ತಾಲೂಕಿನ ಬೆಳಕನಾಳ ಗ್ರಾಮದಲ್ಲಿರುವ ಶರಣ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಬೆಳಗಿನ ಜಾವ ಹುಂಡಿ ಹಣ ಕಳ್ಳತನ ವಾಗಿರುವ ಬಗ್ಗೆ ವರದಿಯಾಗಿದೆ.
ಕಲಕೇರಿ ರಸ್ತೆಯಲ್ಲಿ ಹುಂಡಿಯನ್ನು ಎಸೆದು ಹೋದ ಕಿಡಿಗೇಡಿಗಳು, ಅದರಲ್ಲಿದ್ದ ಎರಡು ಲಕ್ಷ ರೂಪಾಯಿಯನ್ನು ತಗೆದು ಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಕಲಕೇರಿ ರಸ್ತೆಯಲ್ಲಿರುವ ಡಾಬಾ ದಲ್ಲಿ ಬಿಯರ್ ಬಾಟಲ್ ಕೂಡ ಕಳ್ಳತನ ಮಾಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.