ಕೊಪ್ಪಳ | ʼಒಳಮೀಸಲಾತಿʼ ಅಲೆಮಾರಿಗಳಿಗೆ ಶೇ.1ರಷ್ಟು ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ
ಕೊಪ್ಪಳ: ಒಳಮೀಸಲಾತಿಯಲ್ಲಿ ಸ್ಪರ್ಶ ಅಲೆಮಾರಿ ಸಮುದಾಯಗಳ ಜೊತೆ ಸೇರಿಸದೆ ಅಸ್ಪೃಶ್ಯ ಸಮುದಾಯಗಳನ್ನು ಬೇರ್ಪಡಿಸಿ ಶೇ.1ರಷ್ಟು ಮೀಸಲಾತಿ ಅಲೆಮಾರಿಗಳಿಗೆ ಕೊಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಎಸ್.ಸಿ. ಎಸ್.ಟಿ.ಅಲೆಮಾರಿ ಮಹಾಸಭಾದ ಜಿಲ್ಲಾ ಘಟಕ ಮತ್ತು ಪರಿಶಿಷ್ಟ ಜಾತಿ 59 ಸೂಕ್ಷ್ಮ ಅತಿ ಸೂಕ್ಷ್ಮ ಅಲೆಮಾರಿಗಳ ಸಮುದಾಯಗಳ ಒಳ ಮೀಸಲಾತಿ ವಂಚಿತ ಹೋರಾಟ ಸಮಿತಿ ಜಿಲ್ಲಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಅಶೋಕ ವೃತ್ತದಿಂದ ಜಿಲ್ಲಾ ಆಡಳಿತ ಭವನದವರೆಗೆ ಅಪಾರ ಸಂಖ್ಯೆಯಲ್ಲಿ ಅಲೆಮಾರಿ ಸಮುದಾಯದವರು ಬೃಹತ್ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿ ಸುರೇಶ್ ಬಿ.ಇಟ್ನಾಳ್ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಒಳ ಮೀಸಲಾತಿ ಏತಕ್ಕೆ ಕೊಡುತ್ತಿದ್ದೀರಿ ಮತ್ತು ಅದರ ಮೂಲ ಸಂವಿಧಾನಾತ್ಮಕ ಚಿಂತನೆ ಏನು ಮತ್ತು ಅದಕ್ಕನುಗುಣವಾದ ಮೀಸಲಾತಿಯನ್ನು ಇಲ್ಲಿ ದಲಿತರಿಂದ ಹಿಡಿದು ಈ ನಾಡಿನ ಅಲೆಮಾರಿಗಳಿಗೆ ತಲುಪಿಸಿದ್ದೀರಾ, ಒಳ ಮೀಸಲಾತಿ ಸಮುದಾಯದ ಗಣತಿ ನಡೆದಾಗ ಇದ್ದಂತ ಮಾನದಂಡ ಕೊನೆಯ ಹಂತದಲ್ಲಿ ಏಕೆ ಬದಲಾಯಿತು, ಯಾವ ಕಾರಣಕ್ಕೆ ಬದಲಾಯಿತು, ಜನ ಪ್ರಜ್ಞಾವಂತರಿದ್ದಾರೆ, ಜೊತೆಗೆ ತಮ್ಮ ಸರಕಾರದ ಪ್ರತಿಯೊಂದು ವಿಚಾರ ಅರಿತವರಿದ್ದಾರೆ. ಇಲ್ಲಿಯವರೆಗೆ ಒಳ್ಳೆಯ ದಕ್ಷ ಆಡಳಿತ ಜನಸಾಮಾನ್ಯರಿಗೆ ಕೊಟ್ಟ ತಾವುಗಳು ಇದ್ದಕ್ಕಿದ್ದ ಹಾಗೆ ತಮ್ಮ ಸಂಪುಟದಲ್ಲಿ ಯಾರೋ ಹೇಳಿದರು ಎಂದು ತಾವುಗಳು ಅಲೆಮಾರಿಗಳ ಅನ್ನದ ತಟ್ಟೆಗೆ ಕೈ ಹಾಕಿದರೆ ನೋಡಿಕೊಂಡು ಇಲ್ಲಿ ಯಾರು ಸುಮ್ಮನಿರಲ್ಲ ಎಂದು ತಿಳಿಸಿದ್ದಾರೆ.
ಇಡೀ ದಲಿತ ಮತ್ತು ಪ್ರಗತಿಪರ ಹಾಗೂ ಸಮಾಜ ಹಿತಚಿಂತಕರು, ಸಾಹಿತಿಗಳು, ಅಂಬೇಡ್ಕರ್ ಅವರ ಆದರ್ಶಗಳಿಗೆ ಗೌರವಕೊಡುವುದರ ಮೂಲಕ ಇವತ್ತು ಎಡಗೈ ಹಾಗೂ ಬಲಗೈ ಸಮುದಾಯಗಳಿಗೂ ಕೂಡಾ ತೃಪ್ತಿಕರ ಮೀಸಲಾತಿ ಕೊಟ್ಟಿಲ್ಲ, ಜೊತೆಗೆ ಅಲೆಮಾರಿಗಳನ್ನು, ಅಸ್ಪೃಶ್ಯತೆ ಯಿಂದ ನೊಂದ ಸಮುದಾಯಗಳನ್ನು ಸ್ಪರ್ಶ್ಯ ಸಮುದಾಯದ ಜೊತೆಗೆ ಸೇರಿಸಿ ಕೊಡುತ್ತಿರುವ ಶೇ.1 ಮೀಸಲಾತಿನೇ ಆಗಲಿ. ಅಸ್ಪೃಶ್ಯರಿಗೆನೇ ಬೇರೆ ಶೇ.1 ಮೀಸಲಾತಿ ಬೇಕು. ಒಂದು ವೇಳೆ ತಾವುಗಳು ಕೊಡದೆ ಹೋದರೆ, ಮುಂದಿನ ರಾಜ್ಯದ ಯಾವುದೇ ಚುನಾವಣೆ ಆಗಿರಲಿ ಸಮಸ್ತ ಅಲೆಮಾರಿಗಳಿಂದ ಚುನಾವಣೆ ಬಹಿಷ್ಕಾರ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕೊಪ್ಪಳ ಜಿಲ್ಲೆಯ ಅಲೆಮಾರಿ ಹೋರಾಟಕ್ಕೆ ದಲಿತ ಮತ್ತು ಪ್ರಗತಿಪರ ಮುಖಂಡ ಹಿರಿಯ ಹೋರಾಟಗಾರ ಅಲ್ಲಮ ಪ್ರಭು ಬೆಟ್ಟದೂರು, ಬಸವರಾಜ್ ಶೀಲವಂತರ, ಮಹಾಂತೇಶ್ ಕೊತಬಾಳ, ಮುದುಕಪ್ಪ ಹೊಸಮನಿ, ಎಸ್.ಎ.ಗಫಾರ್, ಕಾಶಪ್ಪ ಚಲವಾದಿ, ಮಲ್ಲಿಕಾರ್ಜುನ್ ಪೂಜಾರ್, ಶಿವಪ್ಪ ಹಡಪದ, ರಾಮಲಿoಗಯ್ಯ ಶಾಸ್ತ್ರಿ ಮಠ, ಪಾಸ್ಟರ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್, ಮಾರ್ಕಂಡೆಯ ಬೆಲ್ಲದ, ಶೇಷಣ್ಣ ಶಹಪುರ್, ಬಸವರಾಜ್ ವಿಭೂತಿ, ಗಾಳೆಪ್ಪ ಮುಂಗೋಲಿ, ಪ್ರಕಾಶ್ ಕಟ್ಟಿಮನಿ, ವಿರೇಶ್ ವಕೀಲರು, ಸೋಮು ಕಲಕೇರಿ, ಕಾಶಿಮ್ ಕುಷ್ಟಗಿ, ಗಣೇಶ್ ಹೋರತಟ್ನಾಳ, ಶಿವಣ್ಣ ಕಲಕೇರಿ, ದ್ಯಾಮಣ್ಣ ಪರಿಯವರ, ವೆಂಕಟೇಶ್ ಗಾದಿ, ಸುಂಕಪ್ಪ ಮೀಸಿ, ಲಲಿತಾ ಮಜ್ಜಿಗಿ, ಮಾರುತಿ ಕಟ್ಟಿಮನಿ, ರಂಗಪ್ಪ ಹಡಗಲಿ, ಅಲೆಮಾರಿ ಬುಡಕಟ್ಟು ಸಂಘಟನೆಯ ಜಿಲ್ಲಾ ಅಧ್ಯಕ್ಷ ಸಂಜಯ್ ದಾಸ್ ಕೌಜಗೇರಿ, ಜಿಲ್ಲಾ ಉಪಾಧ್ಯಕ್ಷ ಬಸವರಾಜ್ ವಿಭೂತಿ, ಜಿಲ್ಲಾ ಗೌರವ ಅಧ್ಯಕ್ಷ ಶಿವಣ್ಣ ಒಂಟೆತ್ತಿನವರ, ಸುಡುಗಾಡು ಸಿದ್ದರು, ಬುಡುಗ ಜಂಗಮ, ಚೆನ್ನದಾಸರ, ಹೊಲೆಯ ದಾಸರ, ಮಾಲಾದಾಸರ ಶಿಳ್ಳೆಕ್ಯಾತ ಮತ್ತಿತರರು ಉಪಸ್ಥಿತರಿದ್ದರು,