ಬಾಗೇಪಲ್ಲಿ| ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ: ಓರ್ವ ಸಾವು, ಮೂವರು ಗಂಭೀರ

Update: 2024-01-14 12:50 GMT

ಬಾಗೇಪಲ್ಲಿ: ತಾಲೂಕಿನ ಗೂಳೂರು ಹೋಬಳಿ ನಲ್ಲಪರೆಡ್ಡಿಪಲ್ಲಿ ಕೆರೆ ಕಟ್ಟೆ ಬಳಿ ಎರಡು ದ್ವಿಚಕ್ರ ವಾಹನಗಳ ನಡುವೆ ಪರಸ್ಪರ ಢಿಕ್ಕಿ ಸಂಭವಸಿ ಸ್ಥಳದಲ್ಲೇ ದ್ವಿಚಕ್ರ ವಾಹನ ಸವಾರ ಕುಲಾಯಪ್ಪ(42) ಸ್ಥಳದಲ್ಲೇ ಮತಪಟ್ಟಿದ್ದು ಮೂರು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.

ಆಂಧ್ರಪ್ರದೇಶದ ಗೊಲ್ಲಪಲ್ಲಿ ಗ್ರಾಮದಿಂದ ಕುಲಾಯಪ್ಪ ಮತ್ತು ನಾಗರಾಜು ಎಂಬುವರು ಗೂಳೂರು ಕಡೆಯಿಂದ ಬಾಗೇಪಲ್ಲಿ ಕಡೆ ಬರುತ್ತಿದ್ದಾಗ ಬಾಗೇಪಲ್ಲಿ ಕಡೆಯಿಂದ ಸ್ವಗ್ರಾಮ ಕೊತ್ತಕೋಟೆಗೆ ತೆರಳಲು ಶಿವಾರೆಡ್ಡಿ ಮತ್ತು ಗಂಗಿರೆಡ್ಡಿ ದ್ವಿಚಕ್ರ ವಾಹನಗಳಲ್ಲಿ ಬರುತ್ತಿದ್ದಾಗ ಪರಸ್ಪರ ಢಿಕ್ಕಿ ಸಂಭವಿಸಿ ಅಪಘಾತ ನಡೆದಿದೆ. ಕೊತ್ತಕೋಟೆ ಗ್ರಾಮದ ಶಿವಾರೆಡ್ಡಿ, ಗಂಗಿರೆಡ್ಡಿ ಮತ್ತು ಗೊಲ್ಲಪಲ್ಲಿ ಗ್ರಾಮದ ನಾಗರಾಜು ಅವರುಗಳಿಗೆ ತೀವ್ರ ಸ್ವರೂಪದ ಗಾಯಳುಗಳು ಆಗಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ತಿರುವು ರಸ್ತೆಯಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿರುವುದರಿಂದ ಪೊಲೀಸರು ಸೂಚನ ಫಲಕಗಳ ಅಳವಡಿಸಿ ಅಪಘಾತಗಳು ತಡೆಯುವ ವ್ಯವಸ್ಥೆ ಮಾಡಬೇಕೆಂದು ಪ್ರಯಾಣಕರು ಆಗ್ರಹಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೋಲೀಸ್ ಇನ್ಸ್‍ಪೆಕ್ಟರ್ ಪ್ರಶಾಂತ್ ಆರ್ ವರ್ಣಿ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News