×
Ad

Raichur | ಜಾನುವಾರುಗಳ ಸಾಗಣೆಗೆ ತಡೆ ಒಡ್ಡುವವರ ವಿರುದ್ಧ ಕ್ರಮಕ್ಕೆ ಒತ್ತಾಯ

Update: 2026-05-09 23:02 IST

ರಾಯಚೂರು : ಜಾನುವಾರು ಮಾರುಕಟ್ಟೆಯಲ್ಲಿ ಖರೀದಿಸಿದ ದನಕರು, ಕುರಿಗಳು ಹಾಗೂ ಸಾಗಣೆ ಮಾಡುವಾಗ ಕೆಲ ದುಷ್ಕರ್ಮಿಗಳು ಸಂಘಟನೆಗಳ ಹೆಸರಿನಲ್ಲಿ ತಡೆದು ದೌರ್ಜನ್ಯ ನಡೆಸುತ್ತಿದ್ದು, ಹಂತವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಹಿಂದೂ ಮುಸ್ಲಿಂ ಏಕತಾ ಮಂಚ್ ಸಮಿತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ಖುರೇಶಿ ಸಮುದಾಯದವರು ಸಂತೆಯಲ್ಲಿ ದನಕರುಗಳು, ಕುರಿ ಮೇಕೆಗಳನ್ನೂ ಖರೀದಿಸಿ ಸಾಗಣೆ ಮಾಡುವ ಮೂಲಕ ಉಪ ಜೀವನ ನಡೆಸುತ್ತಿದ್ದಾರೆ. ವಯಸ್ಸಾದ ದನಗಳು, ಗೋವುಗಳನ್ನು ರೈತರು ಖುರೇಶಿ ಸಮುದಾಯಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಇಬ್ಬರಲ್ಲೂ ವ್ಯವಹಾರ ನಡೆಯುತ್ತಿದೆ. ಆದರೆ, ಕೆಲ ದುಷ್ಕರ್ಮಿಗಳು ವಾಹನಗಳನ್ನು ತಡೆದು ಚಾಲಕರ ಮೇಲೆ ಹಲ್ಲೆ ನಡೆಸಿ ಗುಂಡಾ ವರ್ತನೆ ತೋರುತ್ತಿದ್ದಾರೆ. ಕಾನೂನನ್ನು ಕೈಗೆತ್ತಿಕೊಂಡು ಹಲ್ಲೆ ಮಾಡುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ, ಎಂಆರ್ ಎಚ್ ಎಸ್ ರಾಜ್ಯಾಧ್ಯಕ್ಷ ಜೆಬಿ ರಾಜು, ವಿವಿಧ ಸಂಘಟನೆಗಳ ಮುಖಂಡರಾದ ಖಾಜಾ ಅಸ್ಲಂ ಅಹಮದ್, ಜಾನ್ ವೆಸ್ಲಿ ಕಾತರಕಿ, ರವೀಂದ್ರನಾಥ್ ಪಟ್ಟಿ, ಎಂ ಆರ್ ಬೇರಿ, ಆಂಜನೇಯ ಕುರುಬದೊಡ್ಡಿ, ಪೈಸಲ್ ಖಾನ್, ಸೋಹೈಲ್ ನಾಯಕ್, ನರಸಿಂಹಲು, ಬಿ.ಬಸವರಾಜ, ಮಹಮ್ಮದ್ ಸಾಜೀದ್ ಮತ್ತಿತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News