ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಸದಸ್ಯತ್ವ ರದ್ದು; ಕಾಂಗೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡಗೆ ಗೆಲುವು
ಚಿಕ್ಕಮಗಳೂರು : ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಸದಸ್ಯತ್ವ ರದ್ದಾಗಿದ್ದು, ಗಾಯತ್ರಿ ಶಾಂತೇಗೌಡ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪಿನಂತೆ ಇಂದು(ಶುಕ್ರವಾರ) ರಾಜ್ಯ ಹೈಕೋರ್ಟಿನಲ್ಲಿ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡರ ಅರ್ಜಿ ವಿಚಾರಣೆ ನಡೆದು ಅವರನ್ನು ಒಂಬತ್ತು ಮತಗಳ ಅಂತರದಿಂದ ವಿಜೇತ ಅಭ್ಯರ್ಥಿ ಎಂದು ಘೋಷಿಸಲಾಗಿದೆ.
ಕೇವಲ 6 ಮತಗಳ ಅಂತರದಿಂದ ಸೋಲು ಕಂಡಿದ್ದ ಗಾಯತ್ರಿ ಶಾಂತೇಗೌಡರ ವಿರುದ್ಧ ಮತದಾನಕ್ಕೆ ಅರ್ಹರಲ್ಲದ ಕೊಪ್ಪ, ನರಸಿಂಹರಾಜಪುರ, ಶೃಂಗೇರಿ ಮತ್ತು ಮೂಡಿಗೆರೆ ಪಟ್ಟಣ ಪಂಚಾಯತಿ ನಾಮ ನಿರ್ದೇಶನ ಸದಸ್ಯರು ಮತ ಚಲಾಯಿಸಿರುವುದು ಸೋಲಿಗೆ ಕಾರಣವಾಗಿತ್ತು.
2021 ಡಿಸೆಂಬರ್ ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಂ.ಕೆ. ಪ್ರಾಣೇಶ್ 1188 ಮತಗಳನ್ನು ಮತ್ತು ಗಾಯತ್ರಿ ಶಾಂತೇಗೌಡ 1182 ಮತಗಳನ್ನು ಪಡೆದಿದ್ದರು. ಗಾಯತ್ರಿ ಶಾಂತೇಗೌಡಕೇವಲ 6 ಮತಗಳಿಂದ ಪರಾಜಯ ಹೊಂದಿದ್ದರು. ಅನರ್ಹ 12 ಮತಗಳು ಅರ್ಹತೆ ಕಳೆದು ಕೊಂಡಿರುವುದರಿಂದ ಇಂದಿನ ತೀರ್ಪಿನಲ್ಲಿ ಗಾಯತ್ರಿ ಶಾಂತೇಗೌಡ 9 ಮತಗಳ ಅಂತರದಲ್ಲಿ ಜಯಶಾಲಿ ಎಂದು ಘೋಷಿಸಲ್ಪಟ್ಟಿದ್ದಾರೆ.