×
Ad

ಬಿಜೆಪಿ ಜೊತೆ ಮೈತ್ರಿಗೆ ಸಹಮತವಿಲ್ಲ: ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಜೆಡಿಎಸ್ ಶಾಸಕ

Update: 2023-09-10 19:21 IST

ಚಿತ್ರ- ಜೆಡಿಎಸ್‌ ನಾಯಕರು 

ಯಾದಗಿರಿ: 2024ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಹಾಗೂ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ನೇತೃತ್ವದ ಜೆಡಿಎಸ್ ಪಕ್ಷದ ನಡುವೆ ಮೈತ್ರಿ ಮಾತುಕತೆ ನಡೆಯುತ್ತಿದೆ ಎಂಬ ಚರ್ಚೆ ನಡುವೆಯೇ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼ ಸದ್ಯದ ನಿರ್ಧಾರದ ಬಗ್ಗೆ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ನನಗೆ ಸಹಮತವಿಲ್ಲ. ಆದರೆ ಪಕ್ಷದ ನಿರ್ಧಾರವನ್ನು ಯಾರೂ ಕಡೆಗಣನೆ ಮಾಡುವುದಕ್ಕೂ ಆಗಲ್ಲ. ಆದರೆ ನಾನು ಕಾರ್ಯಕರ್ತರ ಅಭಿಪ್ರಾಯ ಕೇಳಬೇಕಾಗುತ್ತದೆʼʼ ಎಂದು ಹೇಳಿದ್ದಾರೆ. 

ʼʼಅಲ್ಲದೇ, ದೇವೇಗೌಡರು ಬಿಜೆಪಿ ಜೊತೆ ಮೈತ್ರಿಗೆ ನೂರಕ್ಕೆ ನೂರು ಒಪ್ಪಲ್ಲ. ಒಂದು ವೇಳೆ ಒಪ್ಪಿಗೆ ಕೊಟ್ಟರೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತೆ. ನಮ್ಮ ಪಕ್ಷದ ಪರಿಸ್ಥಿತಿ ಸದ್ಯ ಬಹಳ ಹದಗೆಟ್ಟಿದೆʼʼ ಎಂದು ಅವರು ಹೇಳಿದ್ದಾರೆ. 

ಶರಣಗೌಡ ಕಂದಕೂರು ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಎಚ್.ಡಿ ಕುಮಾರಸ್ವಾಮಿ, ʼʼಶರಣಗೌಡ ಕಂದಕೂರು ನಮ್ಮ ಹುಡುಗ, ಸರಿಪಡಿಸೋಣ. ಇದನ್ನೆಲ್ಲ ದೊಡ್ಡ ವಿಚಾರ ಮಾಡೋದು ಬೇಡʼʼ ಎಂದು ಹೇಳಿದ್ದಾರೆ. 

 ಶರಣಗೌಡ ಕಂದಕೂರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News