ಪಾವಗಡ | ಕುಡಿದ ಮತ್ತಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಜಗಳ ; ಕೊಲೆಯಲ್ಲಿ ಅಂತ್ಯ

Update: 2024-04-26 13:49 GMT

ಪಾವಗಡ : ಕುಡಿದ ಮತ್ತಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಶುರುವಾಗಿರುವ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆಯೊಂದು ತಾಲ್ಲೂಕಿನ ಭೂಪೂರು ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಭೂಪೂರು ತಾಂಡಾದ ಗೋಪಾಲ್ ನಾಯ್ಕ್ (40) ಹತ್ಯೆಯಾದ ವ್ಯಕ್ತಿಯಾಗಿದ್ದು, ಆರೋಪಿಯನ್ನು ನಾಗರಾಜ್ ನಾಯ್ಕ್ ಎಂದು ಗುರುತಿಸಲಾಗಿದೆ.

ಎಪ್ರಿಲ್ 25 ರ ರಾತ್ರಿ ಗ್ರಾಮದ ಕಟ್ಟೆಯ ಮೇಲೆ ಕುಳಿತಿದ್ದ ಗೋಪಾಲ್ ನಾಯ್ಕ್ ಮೇಲೆ ದ್ವಿಚಕ್ರವಾಹನದಲ್ಲಿ ಬಂದಿದ್ದ ಆರೋಪಿ ನಾಗರಾಜ್ ನಾಯ್ಕ್ ರಾತ್ರಿ 9 ಸಮಯದಲ್ಲಿ ಢಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಢಿಕ್ಕಿ ಹೊಡೆದ ಪರಿಣಾಮ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದ್ದು, ಗ್ರಾಮಸ್ಥರು ಘರ್ಷಣೆಯನ್ನು ಬಿಡಿಸಿ ಬುದ್ಧಿ ಹೇಳಿದ್ದಾರೆ ಎನ್ನಲಾಗಿದೆ.

ಬಳಿಕ ಇದರಿಂದ ಕೋಪಗೊಂಡ ನಾಗರಾಜ್ ನಾಯ್ಕ್ ತನ್ನ ಮನೆ ಮುಂದೆ ಚೂರಿ ತೆಗೆದುಕೊಂಡು ಕಾದು ಕುಳಿತಿದ್ದು, ಮತ್ತೆ ಜಗಳ ಆರಂಭಿಸಿ‌, ಚೂರಿಯಿಂದ ಗೋಪಾಲ್ ನಾಯ್ಕ್ , ತರುಣ್ ನಾಯ್ಕ್, ಹೇಮಂತ್ ನಾಯ್ಕ್ ಎಂಬವರಿಗೆ ಚುಚ್ಚಿದ್ದಾನೆ ಎಂದು ಹೇಳಲಾಗಿದೆ.  ಗೋಪಾಲ್ ನಾಯ್ಕ್ ಆಸ್ಪತ್ರೆಗೆ ಸಾಗಿಸುವ ಮಧ್ಯ ದಾರಿಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ತಿರುಮಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News