×
Ad

ಬೈಕ್ ಢಿಕ್ಕಿ: ಅಸ್ಸಾಂ ಮೂಲದ ಕಾರ್ಮಿಕ ಮೃತ್ಯು

Update: 2024-08-24 21:55 IST

ಬ್ರಹ್ಮಾವರ, ಆ.24: ಬೈಕ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ಅಸ್ಸಾಂ ಮೂಲದ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಆ.23ರಂದು ರಾತ್ರಿ ವೇಳೆ ದೂಪದಕಟ್ಟೆ-ಹೊನ್ನಾಳ ರಸ್ತೆಯ ದುರ್ಗಾ ಹೋಟೆಲ್ ಎದುರು ನಡೆದಿದೆ.

ಮೃತರನ್ನು ಅಸ್ಸಾಂ ಮೂಲದ, ಬೈಕಾಡಿಯ ಗೊವನ್ ಪ್ರೇಶ್ ಮೆರೆನ್ ಎಕ್ಸ್‌ಪೋರ್ಟ್ ಪ್ರೈವೆಟ್ ಲಿಮಿಟೆಡ್‌ನ ಕಾರ್ಮಿಕ ಸುಮೇನ್ ದಾಸ್ ಎಂದು ಗುರುತಿಸಲಾಗಿದೆ. ಬ್ರಹ್ಮಾವರ ಕಡೆಯಿಂದ ಹೊನ್ನಾಳ ಕಡೆಗೆ ಬರುತ್ತಿದ್ದ ಬೈಕ್, ಇತರರೊಂದಿಗೆ ರಸ್ತೆ ದಾಟಲು ನಿಂತಿದ್ದ ಸುಮೇನ್‌ದಾಸ್‌ಗೆ ಹಿಂದಿನಿಂದ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಅವರು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆ.24ರಂದು ನಸುಕಿನ ವೇಳೆ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News