×
Ad

ದೋಣಿಯಿಂದ ಹೊಳೆಗೆ ಬಿದ್ದು ಮೀನುಗಾರ ಮೃತ್ಯು

Update: 2023-07-17 22:07 IST

ಕಾಪು, ಜು.17: ಉದ್ಯಾವರ ಪಿತ್ರೋಡಿಯ ಪಾಪನಾಶಿನಿ ಹೊಳೆಯಲ್ಲಿ ಮೀನು ಹಿಡಿಯಲು ಬಲೆ ಬೀಸುವ ವೇಳೆ ಮೀನುಗಾರರೊಬ್ಬರು ದೋಣಿ ಯಿಂದ ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಉದ್ಯಾವರ ಅಂಕುದ್ರುವಿನ ರಾಘು(60) ಎಂದು ಗುರುತಿಸ ಲಾಗಿದೆ. ಇವರು ಜು.16ರಂದು ಮಧ್ಯಾಹ್ನ ದೋಣಿಯಲ್ಲಿ ಮೀನು ಹಿಡಿಯಲು ಉದ್ಯಾವರದ ಪಾಪನಾಶಿನಿ ಹೊಳೆಯಲ್ಲಿ ಪಿತ್ರೋಡಿ ಕಡೆಗೆ ಹೋಗಿದ್ದು ಈ ವೇಳೆ ಅವರು ಬಲೆ ಬೀಸುವಾಗ ದೋಣಿಯಿಂದ ಹತೋಟಿ ತಪ್ಪಿಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಇವರ ಮೃತದೇಹವು ಜು.17ರಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಪಿತ್ರೋಡಿ ಪಾಪನಾಶಿನಿ ಹೊಳೆ ಪರಿಸರದ ಚಿಲಿಕುದ್ರು ಎಂಬಲ್ಲಿ ಪತ್ತೆಯಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News