×
Ad

ಉಡುಪಿ ಜಾಮೀಯ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ

Update: 2023-08-15 17:17 IST

ಉಡುಪಿ: ಉಡುಪಿ ಜಾಮಿಯಾ ಮಸೀದಿಯಲ್ಲಿ ಇಂದು ಸ್ವಾತಂತ್ರ್ಯೋತ್ಸವ ದಿನವನ್ನು ಆಚರಿಸಲಾಯಿತು.

ಮಸೀದಿಯ ನೂತನ ಆಡಳಿತ ಸಮಿತಿಯ ಅಧ್ಯಕ್ಷ ರಿಯಾಝ್ ಅಹ್ಮದ್ ಧ್ವಜರೋಹಣಗೈದರು. ಮಸೀದಿಯ ಇಮಾಮ್ ಮೌಲಾನಾ ರಶೀದ್ ಅಹಮದ್ ಉಮ್ರಿ ನದ್ವಿ ಸ್ವಾತಂತ್ರ್ಯಾಚರಣೆಯ ಮಹತ್ವ ಬಗ್ಗೆ ಮಾತಾಡಿದರು.

ಉಡುಪಿ ಪರಿಸರದ ಮುಸಲ್ಲಿಗಳನ್ನೊಳಗೊಂಡ ಹಿರಿಯರಾದ ಕೆ.ಅಬ್ದುಲ್ ಗಫೂರ್, ಕರಾಮತ್ ಅಲಿ, ಹೈದರ್ ಅಲಿ, ಖುರ್ಷಿದ್ ಅಹ್ಮದ್, ಬಿ.ಎಂ. ಅಬ್ಬಾಸ್, ಮುಹಮ್ಮದ್ ಹುಸೇನ್, ಸಯ್ಯದ್ ಯಾಸೀನ್, ಫತಾವುಲ್ಲಾಹ ಅವರನ್ನು ಸನ್ಮಾನಿಸಲಾಯಿತು.

ಉಪಾಧ್ಯಕ್ಷ ವಿ.ಎಸ್.ಉಮರ್ ಸ್ವಾಗತಿಸಿದರು. ಕಾರ್ಯದರ್ಶಿ ಖಾಲಿದ್ ಅಬ್ದುಲ್ ಅಝೀಝ್ ವಂದಿಸಿದರು. ಬಿ.ಎನ್. ಶಾಹಿದ್ ಅಲಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೇರಿ ಸುಮಾರು 200 ಮಂದಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News