ಆ.9, 10ರಂದು ತ್ರಾಸಿಯಲ್ಲಿ ಹಲಸು - ಹಣ್ಣು ಮೇಳ
ಕುಂದಾಪುರ, ಆ.7: ತ್ರಾಸಿಯ ಮಿಲೇನಿಯಮ್ ಚರ್ಚ್ ಹಾಲ್ನಲ್ಲಿ ಆ.9 ಮತ್ತು 10ರಂದು ಹಲಸು ಮತ್ತು ಹಣ್ಣು ಮೇಳ ನಡೆಯಲಿದೆ ಎಂದು ಮಹಮ್ಮದ್ ಹುಸೇನ್ ತಿಳಿಸಿದ್ದಾರೆ.
ಕುಂದಾಪುರದಲ್ಲಿಂದು ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಅವರು, ತ್ರಾಸಿಯಲ್ಲಿ ಪ್ರಥಮ ಬಾರಿಗೆ ಎರಡು ದಿನಗಳ ಕಾಲ ಹಲಸು ಮೇಳ ನಡೆಯಲಿದೆ. ವಿಶೇಷವಾಗಿ ಆಂಧ್ರ ಪ್ರದೇಶದ ಹಲಸು ಹಾಗೂ ಮಾವು ಮೇಳಕ್ಕೆ ಬರಲಿದೆ. ಹಲಸಿನಲ್ಲಿ ಪ್ರಸಿದ್ಧವಾದ ಕೆಂಪು ಹಲಸು, ಕೇಸರಿ, ಹಾಗೂ ಹಳದಿ ಹಲಸುಗಳು ಇಲ್ಲಿ ಲಭ್ಯ ಇದೆ. ರಾಜ್ಯ-ಹೊರರಾಜ್ಯದ ವಿವಿಧೆಡೆಯ ಸಾವಯವ ಮಾದರಿಯಲ್ಲಿ ಬೆಳೆದ ಮಾವು ಮತ್ತು ಹಲಸಿನ ಉತ್ಪನ್ನಗಳು, ಹಣ್ಣಿನ ಖಾದ್ಯಗಳು ಗ್ರಾಹಕರಿಗೆ ಲಭ್ಯ ಇದೆ. ವಿಶೇಷವಾಗಿ ಸ್ಪೇಷಲ್ ಹಲಸಿನ ಹೋಳಿಗೆ, ಸ್ಪೇಷಲ್ ಹಲಸಿನ ಜಿಲೇಬಿ ಗ್ರಾಹಕರಿಗೆ ಲಭ್ಯವಾಗಲಿದೆ ಎಂದರು.
ಹಲಸು ಮೇಳದಲ್ಲಿ ಹಲಸು, ಮಾವು ಹಾಗೂ ವೈವಿಧ್ಯಮಯ ಹೂವಿನ ಗಿಡಗಳು, ಹಣ್ಣಿನ ಗಿಡಗಳ ನರ್ಸರಿಗಳು ಭಾಗವಹಿಸಲಿವೆ. ಬಹು ಆಯ್ಕೆಯ ಗಿಡಗಳು ಲಭ್ಯವಾಗಲಿದೆ. ತರಕಾರಿ, ಹೂವಿನ ಬೀಜಗಳು, ಕೃಷಿ ಉಪಕರಣಗಳು ಸಹಿತ ನೂರಕ್ಕೂ ಅಧಿಕ ಮಳಿಗೆಗಳು ಇರಲಿವೆ ಎಂದರು. ಹಲಸು ಮೇಳವನ್ನು ಸ್ಥಳೀಯ ಚರ್ಚ್ ಧರ್ಮಗುರುಗಳು ಉದ್ಘಾಟಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮಹಮ್ಮದ್ ಯಾಸಿನ್, ಮಾಸ್ರು, ಅಬ್ದುಲ್ ಗಫೂರ್ ಉಪಸ್ಥಿತರಿದ್ದರು.