×
Ad

ಹಿರಿಯಡ್ಕ ದೇವಾಡಿಗ ಸಂಘದ ಅಧ್ಯಕ್ಷರಾಗಿ ರಾಜೇಂದ್ರ ಕುಮಾರ್ ಆಯ್ಕೆ

Update: 2023-10-08 19:10 IST

ಹಿರಿಯಡ್ಕ: ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಇದರ ಹಿರಿಯಡ್ಕ ಉಪಸಂಘದ ನೂತನ ಕಾರ್ಯಕಾರಿ ಸಮಿತಿಯ ೨೦೨೩-೨೬ ನೂತನ ಅಧ್ಯಕ್ಷರಾಗಿ ಸ್ಯಾಕ್ಸೋಫೋನ್ ಕಲಾವಿದ ಹಿರಿಯಡ್ಕ ರಾಜೇಂದ್ರ ಕುಮಾರ್ ಆಯ್ಕೆಯಾಗಿದ್ದಾರೆ.

ಕೇಂದ್ರೀಯ ಸಮಿತಿಯ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಉದಯ ಸೇರಿಗಾರ್, ಕಾರ್ಯದರ್ಶಿ ಯಾಗಿ ರಮೇಶ್ ಸೇರಿಗಾರ್, ಕೋಶಾಧಿಕಾರಿಯಾಗಿ ಮಹೇಶ್ ದೇವಾಡಿಗ, ಜೊತೆ ಕಾರ್ಯ ದರ್ಶಿಗಳಾಗಿ ಆಶಾ ರಮೇಶ್, ಮನ್ಮಥ ದೇವಾಡಿಗ, ಸಂಘಟನಾ ಕಾರ್ಯದರ್ಶಿಯಾಗಿ ರತ್ನಾಕರ್ ದೇವಾಡಿಗ ಮತ್ತು ಲತಾ ಚಂದ್ರ ಶೇಖರ ಆಯ್ಕೆಯಾದರು.

ನೂತನ ಕಾರ್ಯಕಾರಿ ಸಮಿತಿಗೆ ಸದಸ್ಯರುಗಳಾಗಿ ಸದಾನಂದ ಸೇರಿಗಾರ್, ಮುದ್ದಣ್ಣ ದೇವಾಡಿಗ, ಪಿ ಮಂಜುನಂಥ ಸೇರಿಗಾರ್, ನಾರಾಯಣ ಸೇರಿಗಾರ್ ಹೆರ್ಗ, ಆನಂದ ಸೇರಿಗಾರ, ನಾರಾಯಣ ಸೇರಿಗಾರ್, ರೇವತಿ ಎಂ, ಮೋಹನ ದೇವಾಡಿಗ, ಸುಂದರ ಸೇರಿಗಾರ, ನಾಗೇಶ, ಸದಾಶಿವ ದೇವಾಡಿಗ, ದಿನೇಶ ದೇವಾಡಿಗ, ರಾಮ ದೇವಾಡಿಗ, ಗೋಪಾಲ ಸೇರಿಗಾರ, ವಿಶ್ವನಾಥ ದೇವಾಡಿಗ, ಎಚ್ ಗಣೇಶ್ ದೇವಾಡಿಗ, ಶಾಂಭವಿ ಆರ್ ಇವರುಗಳು ಅವಿರೋಧ ಆಯ್ಕೆಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News