ಉಡುಪಿ | ಡಾ.ಮಹಾಲಿಂಗುರ ಕೃತಿಗೆ ಪ್ರಶಸ್ತಿ
Update: 2025-12-15 19:44 IST
ಉಡುಪಿ, ಡಿ.15: ಲೇಖಕ, ಅಂಕಣಕಾರ ಮೈಸೂರು ಮೂಲದ ಡಾ.ಕೆ.ಪಿ.ಮಹಾಲಿಂಗು ಕಲ್ಕುಂದ ಅವರ ’ವಿಮೋಚನ ದರ್ಶನ’ ಕೃತಿಗೆ ’ರಾಷ್ಟ್ರೀಯ ಪುಸ್ತಕ ಪ್ರಶಸ್ತಿ’ ಗೌರವ ಲಭಿಸಿದೆ.
ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ ವತಿಯಿಂದ ಡಿ.20ರಂದು ರಾಯಚೂರಿನಲ್ಲಿ ನಡೆಯಲಿರುವ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.