ಉಡುಪಿ| ಬಿಜೆಪಿ ಹಿರಿಯ ಮುಖಂಡ ದಿ.ಸೋಮಶೇಖರ್ ಭಟ್ ನಿವಾಸಕ್ಕೆ ಬಿ.ವೈ.ವಿಜಯೇಂದ್ರ ಭೇಟಿ
Update: 2025-12-28 18:45 IST
ಉಡುಪಿ: ಬಿಜೆಪಿ ಹಿರಿಯ ಮುಖಂಡ ದಿವಂಗತ ಎಂ. ಸೋಮಶೇಖರ್ ಭಟ್ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರವಿವಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಕಿದಿಯೂರು, ಸೋಮಶೇಖರ್ ಭಟ್ ರವರ ಧರ್ಮಪತ್ನಿ ಶಾರದಾ ಭಟ್, ಪುತ್ರರಾದ ಚಿತ್ತರಂಜನ್ ಭಟ್, ವಲ್ಲಭ ಭಟ್, ನಗರಸಭಾ ಸದಸ್ಯೆ ರಶ್ಮಿ ಸಿ.ಭಟ್ ಮೊದಲಾದವರು ಉಪಸ್ಥಿತರಿದ್ದರು.