ಇಂಡೋ-ಮಲೇಷಿಯನ್ ಯೋಗ ಚಾಂಪಿಯನ್ಶಿಪ್ನಲ್ಲಿ ಹರಪನಹಳ್ಳಿ ವಿದ್ಯಾರ್ಥಿಯ ಸಾಧನೆ
ಹರಪನಹಳ್ಳಿ : ತಾಲೂಕಿನ ನೇರೆಬೊಮ್ಮನಹಳ್ಳಿ ಗ್ರಾಮದ ಬಂಡಿ ಶ್ರೇಯಸ್ ಮಲೇಷಿಯಾದ ಕೋಲಾಲಂಪುರದಲ್ಲಿ ನಡೆದ 2ನೇ ಇಂಡೋ-ಮಲೇಷಿಯನ್ ಯೋಗ ಚಾಂಪಿಯನ್ಶಿಪ್-2026ರಲ್ಲಿ ಭಾಗವಹಿಸಿ ತೃತೀಯ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.
ವರ್ಲ್ಡ್ ಯೋಗ ಮತ್ತು ಸ್ಪೋರ್ಟ್ಸ್ ಎಜ್ಯುಕೇಶನ್ ಕೌನ್ಸಿಲ್ ಆಯೋಜಿಸಿದ್ದ ಈ ಚಾಂಪಿಯನ್ಶಿಪ್ನಲ್ಲಿ ಇಂಡಿವಿಜುವಲ್ ಸಾಂಪ್ರದಾಯಿಕ ಯೋಗ ವಿಭಾಗದಲ್ಲಿ ಸ್ಪರ್ಧಿಸಿದ್ದ ಬಂಡಿ ಶ್ರೇಯಸ್ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.
10 ರಿಂದ 12 ವರ್ಷದ ವಯೋಮಾನದ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಶ್ರೇಯಸ್, ತನ್ನ ಅದ್ಭುತ ಪ್ರದರ್ಶನದ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬಂಡಿ ಶ್ರೇಯಸ್ ಅವರು ಹರಪನಹಳ್ಳಿ ತಾಲೂಕಿನ ನೇರೆಬೊಮ್ಮನಹಳ್ಳಿ ಗ್ರಾಮದ ಬಂಡಿ ಶಶಿಕುಮಾರ್ ಹಾಗೂ ಚೈತ್ರಾ ದಂಪತಿಯ ಪುತ್ರನಾಗಿದ್ದು, ಪ್ರಸ್ತುತ ದಾವಣಗೆರೆಯ ಡಾ. ಶಾಮನೂರು ಶಿವಶಂಕರಪ್ಪ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಶಾಲೆಯ ಯೋಗ ಶಿಕ್ಷಕಿ ಸ್ವಪ್ನ ಅವರ ಮಾರ್ಗದರ್ಶನದಲ್ಲಿ ಯೋಗ ತರಬೇತಿ ಪಡೆದಿರುವ ಶ್ರೇಯಸ್ ಅವರ ಸಾಧನೆಗೆ ಗ್ರಾಮಸ್ಥರು, ಶಿಕ್ಷಕರು ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.