ಪುತ್ತೂರು: ಎಸ್ ವೈ.ಎಸ್. ನಿಂದ ಜಿಲ್ಲಾ ಮಟ್ಟದ ರಾಷ್ಟ್ರ ರಕ್ಷಾ ಸಂಗಮ
ಪುತ್ತೂರು: ಸುನ್ನಿ ಯುವಜನ ಸಂಘ(ಎಸ್ ವೈ.ಎಸ್.) ದ.ಕ. ಸಮಿತಿಯ ವತಿಯಿಂದ ಮುಕ್ವೆ ರಹ್ಮಾನಿಯ ಮಸೀದಿ ವಠಾರದಲ್ಲಿ ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಮುಶಾವರ ಸದಸ್ಯ ಶೈಖುನಾ ಬಂಬ್ರಾಣ ಉಸ್ತಾದ್, ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯರು ಜಾತಿ ಮತ ಮೆರೆತು ಒಟ್ಟಾಗಿ ಹೋರಾಡಿದ ಬಗ್ಗೆ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಪ್ರತಿಜ್ಞಾ ವಿಧಿ ಬೋಧಿಸಿ ಸಂದೇಶ ಭಾಷಣ ಮಾಡಿದರು.
ಅತಿಥಿಯಾಗಿ ಆಗಮಿಸಿದ್ದ ಕ್ರೈಸ್ತ ಧರ್ಮಗುರು ಜಾನ್ ಮೊರಾಸ್ ಮಾತನಾಡಿ ಪರಸ್ಪರ ನೋವನ್ನು ಅಳಿಸಿ, ನಿರ್ಭಯವಾಗಿ ಜನ ಓಡಾಡುವ ದಿನ ಸ್ವಾತಂತ್ರ್ಯ ಪೂರ್ಣಗೊಳ್ಳುತ್ತದೆ ಎಂದರು.
ಮುಖ್ಯ ಭಾಷಣ ಮಾಡಿದ ರಾಜ್ಯ ಎಸ್ಕೆಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ, ಸ್ವಾತಂತ್ರ್ಯವನ್ನು ಮನೆ ಮನೆಗಳಲ್ಲಿ ಬಣ್ಣ ಬಳಿದು, ತೋರಣ ಕಟ್ಟಿ ಧ್ವಜ ಹಿಡಿದು ಸಂಭ್ರಮಿಸುತ್ತಿರುವುದು ರಾಷ್ಟ್ರ ಭಕ್ತಿ ಯ ಸಂಕೇತ ಎಂದರು.
ಹಿರಿಯ ವಿದ್ವಾಂಸ ಎಸ್.ಬಿ.ದಾರಿಮಿ ಮಾತನಾಡಿ, ಸ್ವಾತಂತ್ರ್ಯದ ಆಚರಣೆಯನ್ನು ಕೇವಲ ಕಾಟಾಚಾರಕ್ಕೆ ಸೀಮಿತ ಗೊಳಿಸದೇ ದೇಶದ ಭವಿಷ್ಯವನ್ನು ಭದ್ರ ಗೊಳಿಸುವ ನಿಟ್ಟಿನಲ್ಲಿ ಆಶಯ ವಿನಿಮಯಗೊಳ್ಳಬೇಕು ಎಂದರು.
ಸ್ಥಳೀಯ ಖತೀಬ್ ಇರ್ಷಾದ್ ಪೈಝಿ ದುಆ ನೆರವೇರಿಸಿದರು.
ಮಿತ್ತಬೈಲು ಇರ್ಷಾದ್ ದಾರಿಮಿ, ಕುಂಬ್ರ ಕರೀಂ ದಾರಿಮಿ, ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಹಕೀಂ ಪರ್ತಿಪ್ಪಾಡಿ, ಪುತ್ತೂರು ಎಲ್.ಟಿ. ಹಾಜಿ ಶುಭಕೋರಿದರು.
ಸೈಯದ್ ಅಮೀರ್ ತಂಙಳ್ ಝಿಯಾರತ್ ಗೆ ನೇತೃತ್ವ ನೀಡಿದರು. ಕಾರ್ಯಕ್ರಮದ ಚೇರ್ಮೇನ್ ಅಬೂಬಕರ್ ಮುಲಾರ್ ಸ್ವಾಗತಿಸಿದರು
ಮುಖ್ಯ ಅತಿಥಿಗಳಾಗಿ ಕಾಸಿಮ್ ದಾರಿಮಿ, ಶಾಫಿ ದಾರಿಮಿ ಸುಳ್ಯ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ.
ಮುಹಮ್ಮದ್ ಮೌಲವಿ ಮುಂಡೋಲೆ, ಮುಕ್ವೆ ಜಮಾಅತ್ ಅಧ್ಯಕ್ಷ ಇಬ್ರಾಹೀಂ ಮಲಾರ್, ಶಂಸುದ್ದೀನ್ ದಾರಿಮಿ
ಮುಂಡೋಲೆ, ತಾಜುದ್ದೀನ್ ರಹ್ಮಾನಿ, ರಶೀದ್ ರಹ್ಮಾನಿ ಪರ್ಲಡ್ಕ ಜಿಲ್ಲಾ ಮ್ಯಾನೇಜ್ ಮೆಂಟ್ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಹಾಜಿ ಕೊಡಾಜೆ, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಕೆ.ಎಂ.ಎ.ಹನೀಫಿ ಕೊಡುಂಗಾಯಿ, ಮುಸ್ತಫ ಫೈಝಿ ಕಿನ್ಯಾ, ಸ್ವಾಗತ್ ಅಬೂಬಕರ್ ಹಾಜಿ, ರಿಯಾಝ್ ರಹ್ಮಾನಿ, ಅನ್ವರ್ ಮುಸ್ಲಿಯಾರ್, ಶರೀಫ್ ಮಿತ್ತಬೈಲು,
ಹಮೀದ್ ಹಾಜಿ ಜಾಲ್ಸೂರು, ಮುಕ್ವೆ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ರಫೀಕ್ ಮಣಿಯ ಕಾರ್ಯದರ್ಶಿ ಝುಬೈರ್ ನೆರಿಗೆರಿ, ಮುಕ್ವೆ ಜಮಾಅತ್ ಕಾರ್ಯದರ್ಶಿ ಮುಹಮ್ಮದ್ ಕುಂಞಿ ನೆರಿಗೇರಿ, ಕೋಶಾಧಿಕಾರಿ ಉಮರ್ ಹಾಜಿ ಪಟ್ಟೆ, ಮುಕ್ವೆ ಜಮಾಅತ್ ಕಮಿಟಿಯ ಎಲ್ಲಾ ಸದಸ್ಯರು, ಸಮಸ್ತದ ಪೋಷಕ ಸಂಘಟನೆಗಳ ಉಲಮಾ ಉಮರಾ ನಾಯಕರು, ಊರ ಮಹನೀಯರು ಭಾಗವಹಿಸಿದ್ದರು.
ಚಾಪಳ್ಳ ದರ್ಸ್ ವಿದ್ಯಾರ್ಥಿಗಳು ರಾಷ್ಟ ಗೀತೆ ಹಾಡಿದರು.