ಅ.18ರಂದು ಮಾದಕ ದ್ರವ್ಯ ಸೇವನೆ ವಿರುದ್ಧ ವಾಕಥಾನ್
ಮಂಗಳೂರು, ಅ.16: ಮಾದಕ ದ್ರವ್ಯ ಹಾವಳಿ ತಡೆಗೆ ಸರಕಾರ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಪ್ರಯತ್ನ ಗಳಿಗೆ ಪೂರಕವಾಗಿ ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯ, ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ, ಸಂತ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿ, ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಮತ್ತು ಕ್ಯಾಥೋಲಿಕ್ ಶಿಕ್ಷಣ ಮಂಡಳಿ ಸಹಯೋಗದಲ್ಲಿ ಅ. 18ರಂದು ಮಧ್ಯಾಹ್ನ 2:00 ರಿಂದ 4:30 ರವರೆಗೆ ವಾಕಥಾನ್ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಂತ ಅಲೋಶಿಯಸ್ ಮೈದಾನದಲ್ಲಿ ಆರಂಭವಾಗುವ ‘ಸೇ ನೋ ಟು ಡ್ರಗ್ಸ್’ಎಂಬ ಘೋಷಣೆಯೊಂದಿಗೆ ಪಾದ ಯಾತ್ರೆಯು ನೆಹರೂ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ.
ಸಂತ ಅಲೋಶಿಯಸ್ ಡೀಮ್ಡ್ ವಿಶ್ವವಿದ್ಯಾನಿಲಯದ ರೆಕ್ಟರ್ ರೆ.ಫಾ. ಮೆಲ್ವಿನ್ ಪಿಂಟೊ ಅವರು ಮಧ್ಯಾಹ್ನ 2:00 ಗಂಟೆಗೆ ಸಂತ ಅಲೋಶಿಯಸ್ ಮೈದಾನದಲ್ಲಿ ವಿವಿಧ ಪ್ರಮುಖ ಸಂಸ್ಥೆಗಳ ನಿರ್ದೇಶಕರು ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ ವಾಕಥಾನ್ಗೆ ಚಾಲನೆ ನೀಡಲಿದ್ದಾರೆ.
ನೆಹರೂ ಮೈದಾನದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಪಿ. ಮುಲ್ಲೈ ಮುಗಿಲನ್ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಅವರು ಸಂದೇಶ ನೀಡಲಿದ್ದಾರೆ.
ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯವು ಕಳೆದ ವಷರ್ದಿಂದ ಸೆಪ್ಟೆಂಬರ್ ಪೂರ್ತಿ ಮಾದಕ ದ್ರವ್ಯ ವಿರೋಧಿ ಮಾಸವ ನ್ನಾಗಿ ಆಚರಿಸುತ್ತಿದೆ. ಮಾದಕ ವ್ಯಸನದ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಮಾದಕ ವ್ಯಸನಿಯಾಗದಿರಲು ಯುವಕರನ್ನು ಉತ್ತೇಜಿಸುವ ಉದ್ದೇಶದಿಂದ ಇದು ಎರಡನೇ ವರ್ಷದ ಅಭಿಯಾನವಾಗಿದೆ.
ಧರ್ಮಪ್ರಾಂತ್ಯದ ಎಲ್ಲಾ ಪ್ಯಾರಿಸ್ಗಳು, ಅಂಗಸಂಸ್ಥೆ ಶಾಲೆಗಳೊಂದಿಗೆ, ಪ್ರದೇಶದಾದ್ಯಂತ ವಿವಿಧ ಜಾಗೃತಿ ಕಾರ್ಯ ಕ್ರಮಗಳು, ಕಾರ್ಯಾಗಾರಗಳು, ಬೀದಿ ನಾಟಕಗಳು, ಸ್ಪರ್ಧೆಗಳು ಮತ್ತು ರ್ಯಾಲಿಗಳನ್ನು ಸಕ್ರಿಯವಾಗಿ ನಡೆಸುತ್ತಿವೆ.
ಈ ಉಪಕ್ರಮದ ಭಾಗವಾಗಿ ಕಳೆದ ತಿಂಗಳು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳಲ್ಲಿ ಶಿಕ್ಷಕರೊಂದಿಗೆ 50 ಕ್ಕೂ ಹೆಚ್ಚು ಸಲಹೆಗಾರರಿಗೆ ವಿಶೇಷ ತರಬೇತಿಯನ್ನು ನೀಡಲಾಗಿತ್ತು.