ಜ.24ರಂದು ಸಚಿವ ರಹೀಂ ಖಾನ್ ದ.ಕ. ಜಿಲ್ಲಾ ಪ್ರವಾಸ
Update: 2024-01-23 22:59 IST
ಮಂಗಳೂರು: ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ಜನವರಿ 24ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ.
ಬುಧವಾರ ಸಂಜೆ 6.30ಗಂಟೆಗೆ ಮಂಗಳೂರು ಆಗಮನ, ಸಂಜೆ 7ಕ್ಕೆ ಅಡ್ಯಾರ್ ಷಾ ಗಾರ್ಡನ್ನಲ್ಲಿ ಸುನ್ನೀ ಯುವಜನ ಸಂಘದ 30ನೇ ವರ್ಷಾಚರಣೆಯ ಸಮಾರೋಪ ಸಮ್ಮೇಳನದಲ್ಲಿ ಭಾಗವಹಿಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.