×
Ad

ಜ.4 ರಂದು ಉಪ್ಪಿನಂಗಡಿಯಲ್ಲಿ ಸಮಸ್ತ ಶತಮಾನೋತ್ಸವ 'ಗೋಲ್ಡನ್ ಜುಬಿಲಿ' ಪ್ರಚಾರ ಮಹಾಸಮ್ಮೇಳನ

Update: 2026-01-03 21:12 IST

ಉಪ್ಪಿನಂಗಡಿ: ಉಪ್ಪಿನಂಗಡಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮ್ಯಾನೇಜ್ಮೆಂಟ್ ಆಶ್ರಯದಲ್ಲಿ ಗೋಲ್ಡನ್ ಜುಬಿಲಿ ಮತ್ತು ಸಮಸ್ತ 100ನೇ ವಾರ್ಷಿಕ ಪ್ರಚಾರ ಮಹಾಸಮ್ಮೇಳನವು ಜ. 4ರಂದು ಉಪ್ಪಿನಂಗಡಿಯಲ್ಲಿ ನಡೆಯಲಿದೆ.

ರಾಜ್ಯ ಹಾಗೂ ರಾಷ್ಟ್ರಮಟ್ಟದ ಖ್ಯಾತ ಉಲಮಾಗಳು ಮಹಾಸಮ್ಮೇಳನದಲ್ಲಿ ಭಾಗವಹಿಸಿ ಧಾರ್ಮಿಕ ಹಾಗೂ ಶೈಕ್ಷಣಿಕ ವಿಷಯಗಳಲ್ಲಿ ಮಾರ್ಗದರ್ಶನ ನೀಡಲಿದ್ದಾರೆ.  ಪಾಣಕ್ಕಾಡ್ ಸಯ್ಯಿದ್ ಮುಯೀನಲಿ ಶಿಹಾಬ್ ತಂಙಳ್, ಸಯ್ಯಿದ್ ಝೈನುಲ್ ಆಬಿದ್ ಜಿಫ್ರಿ ತಂಙಳ್, ಸಯ್ಯಿದ್ ಅಮೀರ್ ತಂಙಳ್, ಸಯ್ಯಿದ್ ಜುನೈದ್ ಜಿಫ್ರಿ ತಂಙಳ್, ಸಯ್ಯಿದ್ ಅನಸ್ ಅಲ್ ಹಾದಿ ತಂಙಳ್, ಶೈಖುನಾ ಉಮರ್ ಫೈಝಿ ಮುಕ್ಕಂ, ಶೈಖುನಾ ತ್ವಾಖಾ ಉಸ್ತಾದ್, ಶೈಖುನಾ ಉಸ್ಮಾನ್ ಫೈಝಿ ತೋಡಾರ್ ಉಸ್ತಾದ್, ಶೈಖುನಾ ಬಂಬ್ರಾಣ ಉಸ್ತಾದ್, ಮುಜೀಬುರ್ರಹ್ಮಾನ್ ಅನ್ಸಾರಿ ನೀಲಗಿರಿ, ಸತ್ತಾರ್ ಪಂದಲ್ಲೂರು ಸಾಹಿಬ್, ಅಬ್ದುಸ್ಸಲಾಂ ಫೈಝಿ ಉಪ್ಪಿನಂಗಡಿ ಸೇರಿದಂತೆ ಅನೇಕ ಗಣ್ಯ ಉಲಮಾಗಳು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮವನ್ನು ಎಚ್. ಯುಸುಫ್ ಹಾಜಿಯವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣವನ್ನು ರೇಂಜ್ ಅಧ್ಯಕ್ಷ ಇಸ್ಹಾಕ್ ಫೈಝಿ ಮಾಡಲಿದ್ದು, ಕರಾಯ ಅಬ್ದುಲ್ ರಝಾಕ್ ದಾರಿಮಿ ಕಿರಾಅತ್ ಪಠಿಸಲಿದ್ದಾರೆ. ಕಾರ್ಯಕ್ರಮದ ನಿರ್ವಹಣೆಯನ್ನು ಅಬ್ದುಲ್ ಜಬ್ಬಾರ್ ಮೌಲವಿ ಕರಾಯ ವಹಿಸಲಿದ್ದಾರೆ. ಸಮಸ್ತದ ಶತಮಾನೋತ್ಸವದ ಮಹತ್ವ, ಧಾರ್ಮಿಕ–ಶೈಕ್ಷಣಿಕ ಸೇವೆಗಳ ಪಾತ್ರ ಹಾಗೂ ಸಮುದಾಯದ ಭವಿಷ್ಯದ ಕುರಿತು ಮಹಾಸಮ್ಮೇಳನದಲ್ಲಿ ಪ್ರಬೋಧನೆ ನೀಡಲಾಗುತ್ತದೆ. ಈ ಕಾರ್ಯಕ್ರಮವು ಸಮಸ್ತ ಸೆಂಟಿನರಿ (1926–2026) ಹಾಗೂ ಉಪ್ಪಿನಂಗಡಿ ರೇಂಜ್ ಗೋಲ್ಡನ್ ಜುಬಿಲಿ ಸಂಭ್ರಮದ ಪ್ರಮುಖ ಕಾರ್ಯಕ್ರಮವಾಗಿರಲಿದೆ.

ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 1.30ಕ್ಕೆ SKSBV ಸ್ವಯಂಸೇವಕ ವಿಭಾಗದ ಖಿದ್ಮ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಸಮ್ಮೇಳನ ನಗರಿಯಲ್ಲಿ ವಿದ್ಯಾರ್ಥಿ ಸಮಾವೇಶವು ಕೆ.ಎಚ್. ಅಶ್ರಫ್ ಹನೀಫಿಯವರ ನೇತೃತ್ವದಲ್ಲಿ ನಡೆಯಲಿದ್ದು, ತರಬೇತುದಾರರಾಗಿ ಹಾಶಿಂ ರಹ್ಮಾನಿ ಸಾಲ್ಮರ, ಮುದರ್ರಿಬ್ SKJMCC ಹಾಗೂ ಉಪ್ಪಿನಂಗಡಿ ರೇಂಜ್ ಉಪಾಧ್ಯಕ್ಷ ಹಾರಿಸ್ ಕೌಸರಿ ಕೋಲ್ಪೆ ಭಾಗವಹಿಸಲಿದ್ದಾರೆ.


ಸಂಜೆ 4.30ಕ್ಕೆ ಸ್ವಾಗತ ಸಮಿತಿ ಕೋಶಾಧಿಕಾರಿ ಕೆ.ಕೆ. ಅಬೂಬಕ್ಕರ್ ಕೋಲ್ಪೆ ಅವರಿಂದ ಧ್ವಜಾರೋಹಣ ನಡೆಯಲಿದೆ. 4.45ಕ್ಕೆ ಗ್ರಾಂಡ್ ಸೆಲ್ಯೂಟ್ ಹಾಗೂ ಕಾಲ್ನಡಿಗೆ ಜಾಥಾ ನಡೆಯಲಿದ್ದು, 313 ವಿದ್ಯಾರ್ಥಿಗಳಿಂದ ವಿಶೇಷ ಪ್ರದರ್ಶನವನ್ನು ಸಯ್ಯಿದ್ ಇಸ್ಮಾಯಿಲ್ ತಂಙಳ್, ಶಬೀರ್ ಕೆಂಪಿ, ಯು.ಟಿ. ಫಯಾಝ್ ಹಾಗೂ ಮುಹಮ್ಮದ್ ಕೂಟೇಲು ಅವರ ನೇತೃತ್ವದಲ್ಲಿ ನಡೆಸಲಾಗುತ್ತದೆ. ಈ ವೇಳೆ ಪ್ರಸ್ತುತ ಧ್ವಜ ಹಸ್ತಾಂತರವನ್ನು ಅಬ್ದುಲ್ ರಹ್ಮಾನ್ ಕೊಳ್ಳೆಜಾಲು (ಅಧ್ಯಕ್ಷರು, ಮದ್ರಸ ರೇಂಜ್ ಮ್ಯಾನೇಜ್ಮೆಂಟ್ ಅಸೋಸಿಯೇಷನ್) ನೆರವೇರಿಸಲಿದ್ದಾರೆ.

ಸಂಜೆ 5.45ಕ್ಕೆ ಶಂಸುಲ್ ಉಲಮಾ (ಖ.ಸಿ) ಮೌಲೀದ್ ಮಜ್ಲಿಸ್ ಉಸ್ಮಾನ್ ದಾರಿಮಿ ಹಳೆಗೇಟು (ಉಪಾಧ್ಯಕ್ಷರು, ಉಪ್ಪಿನಂಗಡಿ ರೇಂಜ್) ಅವರ ನೇತೃತ್ವದಲ್ಲಿ ನಡೆಯಲಿದ್ದು, ರೇಂಜ್ ವ್ಯಾಪ್ತಿಯ ಮಸೀದಿ ಖತೀಬರು ಹಾಗೂ 32 ಮದ್ರಸ ಮುಖ್ಯ ಶಿಕ್ಷಕರು ಭಾಗವಹಿಸಲಿದ್ದಾರೆ.

ಸ್ಥಳೀಯ ಸಮಸ್ತ ಘಟಕಗಳು, ವಿವಿಧ ಸಂಘ–ಸಂಸ್ಥೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಮಹಾಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News