ಬಂಟ್ವಾಳ: ಪತ್ರಿಕಾ ವಿತರಕ ಯು.ರಮೇಶ್ ಶೆಣೈ ಅವರಿಗೆ ಸನ್ಮಾನ
Update: 2025-07-03 12:13 IST
ಬಂಟ್ವಾಳ : ಪಾಣೆಮಂಗಳೂರು - ಮೆಲ್ಕಾರ್ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ವಾರ್ತಾಭಾರತಿ ಸಹಿತ ಹಲವು ಪತ್ರಿಕೆಗಳ ವಿತರಕರಾಗಿ ಕಾರ್ಯ ನಿರ್ವಹಿಸುತ್ತಿರುವ ಯು.ರಮೇಶ್ ಶೆಣೈ ಅವರನ್ನು ಬಂಟ್ವಾಳ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಇವರು ಕಿವಿ ಕೇಳದ, ಬಾಯಿ ಬಾರದ ನ್ಯೂನತೆಯನ್ನು ಹೊಂದಿದ್ದರೂ ಶ್ರಮಜೀವಿಯಾಗಿ ಮುನ್ನುಗ್ಗುತ್ತಿರುವ ಇವರ ಸಾಧನೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು.