ಕೋಳಿ ಅಂಕ ವಿಚಾರ| ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ: ಪ್ರಕರಣ ದಾಖಲು
Update: 2026-01-04 19:43 IST
ಮಂಗಳೂರು: ಕೋಳಿ ಅಂಕಕ್ಕೆ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ವ್ಯಕ್ತಿಗಳ ಬಗ್ಗೆ ಅವಹೇಳನಕಾರಿಯಾಗಿ ಸಂದೇಶ ಹಾಕಿದ್ದಲ್ಲದೆ ಅವರ ತೇಜೋವಧೆ ನಡೆಸಿದ ಆರೋಪದ ಮೇರೆಗೆ ಫೇಸ್ಬುಕ್ ಖಾತೆದಾರನ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಲಿಯುಗ ಕಲ್ಕಿ ಎಂಬ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಖಾತೆಯಲ್ಲಿ ಆರೋಪಿಯು ಪ್ರಚೋದನಾಕಾರಿ ಪೋಸ್ಟ್ ಮಾಡಿ ಸಮಾಜದ ನಾನಾ ಧರ್ಮ ಹಾಗೂ ವರ್ಗಗಳ ಜನರಲ್ಲಿ ದ್ವೇಷದ ಭಾವನೆ ಹುಟ್ಟು ಹಾಕಿ ಅಪರಾಧ ಕೃತ್ಯವೆಸಗುವಂತೆ ಹಾಗೂ ದ್ವೇಷ ಭಾವನೆ ಹುಟ್ಟುವಂತೆ ಮಾಡಿದ್ದಾನೆ. ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿ ಹಾಳು ಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದ ಮೂಲಕ ದುಷ್ಟ್ರೇರಣೆಗೆ ಎಡೆ ಮಾಡಿಕೊಡುವಂತಹ ಪೋಸ್ಟ್ಗಳನ್ನು ಹರಡಿದ್ದಾನೆ. ಈತ ಈ ಹಿಂದೆ ದೇವಸ್ಥಾನದಲ್ಲೂ ರಾಜಕೀಯ ತರಲು ಬಯಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.