ಮಂಗಳೂರು: ನದಿಗೆ ಬಿದ್ದು ಮೀನುಗಾರ ಮೃತ್ಯು
Update: 2026-01-06 21:00 IST
ಮಂಗಳೂರು: ಮೀನುಗಾರಿಕಾ ಬೋಟ್ ಲಂಗರು ಹಾಕುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿನದಿಗೆ ಬಿದ್ದು ಮೀನುಗಾರ ಸಾವನ್ನಪ್ಪಿದ ಘಟನೆ ನಗರದ ಹಳೆ ಬಂದರ್ನಲ್ಲಿ ನಡೆದಿದೆ.
ಚತ್ತೀಸ್ಘಡ ಜಸ್ಪುರ್ ಜಿಲ್ಲೆಯ ಬರ್ಖಾಸ್ ಪಾಲಿ ಗ್ರಾಮದ ನಿವಾಸಿ ಪ್ರಹ್ಲಾದ್ ಚೌಹಾನ್(33) ಮೃತಪಟ್ಟ ಮೀನುಗಾರ. ವರ್ಷದ ಹಿಂದೆ ಮಂಗಳೂರಿಗೆ ಬಂದು ಮೀನುಗಾರಿಕಾ ಕೆಲಸ ಮಾಡಿಕೊಂಡಿದ್ದ ತೊಡಗಿಸಿಕೊಂಡಿದ್ದ ಇವರು ಸೋಮವಾರ ರಾತ್ರಿ 11ಕ್ಕೆ ಹಳೆ ಬಂದರ್ ಉಪ್ಪುದಕ್ಕೆಯಲ್ಲಿ ಲಂಗರು ಹಾಕಲಾಗಿದ್ದ ಹಸನ್ ಅಲ್ ಬಹಾರ್ ಪರ್ಸಿನ್ ಬೋಟಿನ ಹಗ್ಗ ಕಟ್ಟುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿನದಿಗೆ ಬಿದ್ದಿದ್ದಾರೆ. ಈ ಸಂದರ್ಭ ಬೋಟ್ನಲ್ಲಿದ್ದ ಇತರ ಮೀನುಗಾರರು ಕಾರ್ಯಾಚರಣೆ ನಡೆಸಿ ನೀರಿನಿಂದ ಮೇಲಕ್ಕೆತ್ತಿದರೂ ಪ್ರಹ್ಲಾದ್ ಅದಾಗಲೇ ಮೃತಪಟ್ಟಿದ್ದರು. ಮೃತದೇಹದ ಶವಪರೀಕ್ಷೆ ನಡೆಸಿದ ಬಳಿಕ ತವರೂರಿಗೆ ಕಳುಹಿಸಿಕೊಡಲಾಗಿದೆ ಎಂದು ಪ್ರಕರಣ ದಾಖಲಿಸಿರುವ ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.