ಬೆಳ್ತಂಗಡಿ: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು
Update: 2025-11-21 14:49 IST
ಬೆಳ್ತಂಗಡಿ: ತೆಂಗಿನ ಕಾಯಿ ಕೀಳುವ ವೇಳೆ ಮರದಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದ ಘಟನೆ ನ.20ರಂದು ನಡೆದಿದೆ.
ತೋಟತ್ತಾಡಿ ಗ್ರಾಮದ ಕಜೆ ನಿವಾಸಿ ನಾಗೇಶ್ (47) ಮೃತ ವ್ಯಕ್ತಿ . ನ.20ರಂದು ತೆಂಗಿನ ಕಾಯಿ ಕೀಳಲು ಮರ ಹತ್ತಿದ್ದ ನಾಗೇಶ್ ರವರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ತಿಳಿದು ಬಂದಿದೆ.