×
Ad

ಮಂಗಳೂರು: ಜೆಡಿಎಸ್ ವತಿಯಿಂದ ರಾಜ್ಯ ಸರಕಾರದ ಆಡಳಿತ ವೈಫಲ್ಯದ ವಿರುದ್ಧ ಪ್ರತಿಭಟನೆ

Update: 2025-06-30 14:19 IST

ಮಂಗಳೂರು: ಜಿಲ್ಲಾ ಜನತಾ ದಳ (ಜಾ) ಪಕ್ಷದ ವತಿಯಿಂದ ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಭಟನಾ ಸಭೆಯನ್ನು ತಾಲ್ಲೂಕು ಕಚೇರಿ ಮುಂಭಾಗ ಕೈ ಗೊಳ್ಳಲಾಯಿತು.

ಪಕ್ಷದ ರಾಜ್ಯ ವಕ್ತಾರ M B ಸದಾಶಿವ, ರಾಜ್ಯಪ್ರಧಾನ ಕಾರ್ಯದರ್ಶಿ ವಿಟ್ಲ ಮಹಮ್ಮದ್ ಕುಂಞಿ, ಹೈದರ್ ಪರ್ತಿಪಾಡಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ರಾಜ್ಯ ಪ್ರದಾನ ಕಾರ್ಯದರ್ಶಿ, ಉಡುಪಿ ಜಿಲ್ಲಾ ಉಸ್ತುವಾರಿ ಪ್ರವೀಣ ಚಂದ್ರ ಜೈನ್, ಅಮರಶ್ರೀ ಅಮರನಾಥ್ ಶೆಟ್ಟಿ, ಮಾಜಿ ಕಾರ್ಪೊರೇಟರ್ ಅಜೀಜ್ ಕುದ್ರೋಳಿ, ಕಡಬ ಮೀರಾಸಾಬ್, ಮೋಹನ್ ದಾಸ್ ಉಳ್ಳಾಲ, ಉಸ್ಮಾನ್ ಅಪ್ಸ, ಧನರಾಜ್, ಪುಷ್ಪರಾಜ, ಭಾರತಿ ಪುಷ್ಪರಾಜ, ಮಹಾವೀರ್ ಪುತ್ತೂರು, ವೀಣಾ ಶೆಟ್ಟಿ, ಚೂಡಾಮಣಿ, ವಿನ್ಸೆಂಟ್ ಸುರತ್ಕಲ್, ಕನಕದಾಸ, ರವೀಂದ್ರ ಉಳ್ಳಾಲ, ನಾಗೇಶ್, ಮುನೀರ್ ಮುಕ್ಕಛೇರಿ, ಬೆಂಗ್ರೆ ಹಮೀದ್, ಬೆಂಗ್ರೆ ಮಹಮ್ಮದ್, ಪುತ್ತುಮೋನು, ಸುಕುಮಾರ್ ಕೂಡ್ತಗೊಳಿ, ರಾಕೇಶ್ ಕುಂಟಿಕಾನ್, ಸಂಜೀವ ಮಡಿವಾಳ ಕಟೀಲ್, ನಝೀರ್ ಸಮನಿಗೆ, ಸುಮಿತ್ ಸುವರ್ಣ, ಧರ್ಮರಾಜ ಅಡ್ಕಾಡಿ ಮುಂತಾದ ಮುಖಂಡರು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಯಾಧ್ಯಕ್ಷ ವಸಂತ್ ಪೂಜಾರಿ ಸ್ವಾಗತಿಸಿ ಜಿಲ್ಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಮೂಲ್ಕಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News