×
Ad

ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ದುಬೈನಲ್ಲಿ ಸನ್ಮಾನ

Update: 2023-09-20 13:05 IST

ದುಬೈ: ಇಲ್ಲಿನ ಅಬೂಹೈಲ್ ಸ್ಟಾರ್ ವನ್ ಹೋಟೆಲ್ ನಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಕಾಂಗ್ರೆಸ್ ಕಾಯಕರ್ತರು ಹಾಗೂ ಅವರ ಅಭಿಮಾನಿಗಳು ಸನ್ಮಾನಿಸಿದರು. 

ಯುವ ಕಾಂಗ್ರೆಸ್ ಸದಸ್ಯ ಇಬ್ರಾಹಿಂ ಸಫ್ವಾನ್ ಅವರು ಹೂಗುಚ್ಚ ನೀಡಿ ಶಾಸಕರನ್ನು ಸ್ವಾಗತಿಸಿದರು. ಯುವ ಕಾಂಗ್ರೆಸ್ ಸದಸ್ಯರಾದ ಅಝೀಝ್ ಇಸ್ಮಾಯಿಲ್ ಕೊಡಾಜೆ ಸ್ವಾಗತ ಭಾಷಣ ಮಾಡಿದರು. ಎನ್ ಎಸ್ ಯು ಐ ಮಾಜಿ ಉಪಾಧ್ಯಕ್ಷ ಆಶಿಕ್ ರಹ್ಮಾನ್ ಕಲ್ಲರ್ಪೆ ಶಾಸಕರಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಶಾಸಕರು, ತನ್ನ ಗೆಲುವಿಗೆ ಸಹಕರಿಸಿದ ಅನಿವಾಸಿ ಭಾರತೀಯರಿಗೆ ಕೃತಜ್ಞತೆ ಸಲ್ಲಿಸಿದರು.

ಶಾಫಿ ಕಕ್ಕಿಂಜೆ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ತಸ್ರೀಫ್ ಕುಂಜೂರು ವಂದಿಸಿದರು.

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News