×
Ad

ಎಸ್‌ವೈಎಸ್ ದ.ಕ ಜಿಲ್ಲಾ ವೆಸ್ಟ್ ವತಿಯಿಂದ ಟೋಪ್ಸ್ ಪ್ಲಸ್ ಕಾರ್ಯಾಗಾರ

Update: 2023-12-10 21:34 IST

ಮಂಗಳೂರು; ಎಸ್‌ವೈಎಸ್ ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ವತಿಯಿಂದ ಏಳು ಝೋನ್‌ಗಳ ಕ್ಯಾಬಿನೆಟ್ ನಾಯಕರಿಗಾಗಿ ಟೋಪ್ಸ್ ಪ್ಲಸ್ ಕಾರ್ಯಾಗಾರವು ಜಿಲ್ಲಾಧ್ಯಕ್ಷ ವಿ.ಯು.ಇಸ್ಹಾಕ್ ಝುಹ್ರಿ ಕಾನೆಕೆರೆ ಅಧ್ಯಕ್ಷತೆಯಲ್ಲಿ ಅಡ್ಯಾರ್ ಕಣ್ಣೂರ್ ಸುನ್ನೀ ಸೆಂಟರ್ ನಲ್ಲಿ ನಡೆಯಿತು.

ರಾಜ್ಯ ಇಸಾಬಾ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮಾಲಿಕಿ ಬೋಳಂತೂರು ಉದ್ಘಾಟಿಸಿದರು. ಎಸ್‌ವೈಎಸ್ ರಾಜ್ಯ ನಾಯಕರಾದ ಮುಹಮ್ಮದ್ ಅಲಿ ಸಖಾಫಿ ಸುರಿಬೈಲ್ ತರಗತಿ ನಡೆಸಿದರು.

ಜಿಲ್ಲಾ ವ್ಯಾಪ್ತಿಯ ಏಳು ಝೋನ್ ಕ್ಯಾಬಿನೆಟ್ ನಾಯಕರ ನಡುವೆ ಸಾಂಘಿಕ ಚಟುವಟಿಕೆ ಬಗ್ಗೆ ಅವಲೋಕನ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯ ನಾಯಕರಾದ ಬಶೀರ್ ಮದನಿ ಕೂಳೂರು, ಆಸಿಫ್ ಹಾಜಿ ಕೃಷ್ಣಾಪುರ, ಜಿಲ್ಲಾ ಕೋಶಾಧಿಕಾರಿ ನಝೀರ್ ಮುಡಿಪು, ಜಿಲ್ಲಾ ಕಾರ್ಯದರ್ಶಿಗಳಾದ ಬದ್ರುದ್ದೀನ್ ಅಝ್‌ಜರಿ ಕೈಕಂಬ, ಮೆಹಬೂಬ್ ಸಖಾಫಿ ಕಿನ್ಯ, ಬಶೀರ್ ಸಖಾಫಿ ಉಳ್ಳಾಲ, ಖಾಲಿದ್ ಹಾಜಿ ಭಟ್ಕಳ, ಅಬ್ದುರ್ರಝಾಕ್ ಭಾರತ್ ಮಂಚಿ,ಹಾಫಿಳ್ ಯಾಕೂಬ್ ಸಅದಿ ನಾವೂರುಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ,ತೌಸೀಫ್ ಸ ಅದಿ ಹರೇಕಳ,ಕಾಸಿಂ ಲತೀಫಿ ಮಂಜನಾಡಿ,ಜಬ್ಬಾರ್ ಕಣ್ಣೂರು, ಇಸ್ಹಾಕ್ ಉಳ್ಳಾಲ,ಹಸನ್ ಪಾಂಡೇಶ್ವರ್ ,ಮುತ್ತಲಿಬ್ ವೇಣೂರು,ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.








Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News