ಕಂಬಳವನ್ನು ರಾಜ್ಯಕ್ರೀಡೆಯಾಗಿ ಘೋಷಿಸಲು ಮಂಜುನಾಥ ಭಂಡಾರಿ ಸರಕಾರಕ್ಕೆ ಆಗ್ರಹ
ಫೈಲ್ ಫೋಟೊ
ಮಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಬಜೆಟ್ 2024ರ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಎಂ. ಮಂಜುನಾಥ್ ಭಂಡಾರಿ ಅವರು ಮಂಗಳೂರಿನಲ್ಲಿ ಜನಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿಗಳು, ಕಂಬಳ ಸಮಿತಿಯ ಸದಸ್ಯರು ಹಾಗೂ ಕಂಬಳ ಆಯೋಜಕರ ಸಭೆ ನಡೆಸಿ ಕಂಬಳ ಸಮಿತಿ ರಚಿಸುವಂತೆ ಸಭಾಪತಿಗಳ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಈವರೆಗೆ ಸಮಿತಿ ರಚನೆಯಾಗದಿರುವುದನ್ನು ಸರಕಾರದ ಗಮನಕ್ಕೆ ತಂದು ಶೀಘ್ರವಾಗಿ ಸಮಿತಿ ರಚಿಸುವಂತೆ ಸರಕಾರವನ್ನು ಆಗ್ರಹಿಸಿದರು. ಕಳೆದ ವರ್ಷ ಪುತ್ತೂರು ಶಾಸಕ ಅಶೋಕ ಕುಮಾರ್ರೈ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಕಂಬಳದ ಯಶಸ್ಸನ್ನು ಉಲ್ಲೇಖಿಸುತ್ತಾ ಸ್ಥಗಿತ ಗೊಂಡಿರುವ ಮಂಗಳೂರಿನ ಪಿಳಕುಳದ ಕಂಬಳವನ್ನು ಪ್ರವಾ ಸೋದ್ಯಮ ಇಲಾಖೆ ವತಿಯಿಂದ ಪ್ರಾರಂಭಿಸಿ ಪ್ರವಾಸೋದ್ಯಮ ಚಟುವಟಿಕೆ ಹೆಚ್ಚಿಸಲು ಹಾಗೂ ಬಹಳ ಮುಖ್ಯವಾಗಿ ಕಂಬಳವನ್ನು ರಾಜ್ಯಕ್ರೀಡೆ ಅಥವಾ ನಾಡಕ್ರೀಡೆಯಾಗಿ ಘೋಷಿಸಿ ಹೆಚ್ಚಿನ ಅನುದಾನ ನೀಡುವಂತೆ ನಿಯಮ 72ರಡಿ ಕ್ರೀಡಾ ಸಚಿವರ ಗಮನ ಸೆಳೆದರು.