×
Ad

ಸಚ್ಚರಿಪೇಟೆ ಮದೀನಾ ಮಸೀದಿಯ ಖಾಝಿ ಸ್ವೀಕಾರ

Update: 2024-11-29 19:44 IST

ಮಂಗಳೂರು: ಸಚ್ಚರಿಪೇಟೆ ಮದೀನಾ ಮಸೀದಿಗೊಳಪಟ್ಟ ಜಮಾತ್‌ನ ನೂತನ ಖಾಝಿಯಾಗಿ ದ.ಕ.ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಶುಕ್ರವಾರ ಜುಮ್ಮಾ ನಮಾಝ್ ಬಳಿಕ ಅಧಿಕಾರ ಸ್ವೀಕರಿಸಿದರು.

ಸಯ್ಯದ್ ಹುಸೈನ್ ಬಾಅಲವಿ ತಂಳ್ ಕುಕ್ಕಾಜೆ ಅವರು ತ್ವಾಖಾ ಉಸ್ತಾದ್‌ರಿಗೆ ಖಾಝಿ ಪಟ್ಟ ವಹಿಸಿದರು. ಮಸೀದಿ ಕಮಿಟಿ ಅಧ್ಯಕ್ಷ ಅಬ್ದುಲ್ ರಝಾಕ್ ಸಚ್ಚರಿಪೇಟೆ, ಗೌರವಾಧ್ಯಕ್ಷ ಪುತ್ತುಮೋನು, ಮೂಡುಬಿದಿರೆ ಮಸೀದಿಯ ಖತೀಬ್ ಅಬೂಬಕ್ಕರ್ ಸಿದ್ದೀಕ್ ಫೈಝಿ, ಆಡಳಿತ ಕಮಿಟಿ ಅಧ್ಯಕ್ಷ ಅಬ್ದುರ‌್ರಹ್ಮಾನ್ (ಅಬ್ಬಾಕ), ಶಾಬಾನ್ ಸಚ್ಚರಿಪೇಟೆ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಫಕೀರಬ್ಬ ಮಾಸ್ಟರ್, ಡಿ.ಎ.ಉಸ್ಮಾನ್ ಏರ್ ಇಂಡಿಯಾ, ಅಬ್ದುಸ್ಸಲಾಮ್ ಬೂಟ್ ಬಝಾರ್, ಮಯ್ಯದ್ದಿ ಗುಂಡುಕಲ್ಲು, ಅಬುಲಾಲ್ ಪುತ್ತಿಗೆ, ಅಬ್ದುಲ್ ಖಾದರ್, ಉಸ್ಮಾನ್ ಸೂರಿಂಜೆ, ಮಾಲಿಕ್ ಅಝೀಝ್, ಫಾಯಿಝ್ ಫೈಝಿ ಲಾಡಿ, ರಮ್ಲಾನ್, ಅಹ್ಮದ್ ಹುಸೈನ್ ಗಂಟಾಲ್ಕಟ್ಟೆ, ಮಜೀದ್ ಮತ್ತಿತರರು ಉಪಸ್ಥಿತರಿದ್ದರು.

ಮಸೀದಿಯ ಖತೀಬ್ ಶಾಫಿ ಫೈಝಿ ಸ್ವಾಗತಿಸಿದರು. ಕಾರ್ಯದರ್ಶಿ ಮುಹಮ್ಮದ್ ಹನೀಫ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News