×
Ad

ದ.ಕ.ಜಿಲ್ಲಾ ದಾರಿಮೀಸ್‌ನಿಂದ ಝಕಾತ್ ಬಗ್ಗೆ ಅಧ್ಯಯನ ಶಿಬಿರ ಪ್ರಚಾರ

Update: 2025-05-20 19:11 IST

ಪುತ್ತೂರು: ದಾರಿಮೀಸ್ ಅಸೋಸಿಯೇಶನ್ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಕೇರಳದ ವಾಗ್ಮಿ ಶುಹೈಬ್ ಹೈತಮಿ ಅವರಿಂದ ’ಝಕಾತ್’ ಬಗ್ಗೆ ಅಧ್ಯಯನ ಶಿಬಿರವು ಮೇ 28ರಂದು ಪಾಣೆಮಂಗಳೂರು ನೆಹರೂ ನಗರದ ಜುಮ್ಮಾ ಮಸೀದಿಯ ವಠಾರದಲ್ಲಿ ನಡೆಯಲಿದೆ.

ಪುತ್ತೂರು ತಾಲೂಕಿನ ರೆಂಜಲಾಡಿಯ ಖಾಜಾ ನಗರ್ ರೆಂಜಲಾಡಿ ಇಸ್ಲಾಮಿಕ್ ಸೆಂಟರ್‌ನಲ್ಲಿ ನಡೆದ ಸಭೆಯಲ್ಲಿ ಅಧ್ಯಯನ ಶಿಬಿರದ ಫ್ಲೆಕ್ಸ್ ಬಿಡುಗಡೆಗೊಳಿಸುವ ಮೂಲಕ ಪ್ರಚಾರಕ್ಕೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕೇರಳದ ವಿದ್ವಾಂಸ ಕೆ.ಟಿ.ಅಬ್ದುಲ್ಲಾ ಫೈಝಿ ವೆಳ್ಳಿಮುಕ್ಕ್, ಜಿಲ್ಲಾ ದಾರಿಮೀಸ್ ಅಧ್ಯಕ್ಷ ಕೆ.ಬಿ.ಅಬ್ದುಲ್ ಖಾದಿರ್ ದಾರಿಮಿ ಕೊಡಂಗಾಯಿ, ಗೌರವಾಧ್ಯಕ್ಷ ಮಾಹಿನ್ ದಾರಿಮಿ ಪಾತೂರು, ಎಂ.ಎಸ್.ಮುಹಮ್ಮದ್, ಕೆ.ಎಂ.ಎ.ಕೊಡುಂಗಾಯಿ, ಕೆ. ಆರ್. ಹುಸೈನ್ ದಾರಿಮಿ, ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಯಾಕೂಬ್ ದಾರಿಮಿ, ನಾಸಿರ್ ಫೈಝಿ ರೆಂಜಲಾಡಿ, ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ಮಂಗಳ ಅಬೂಬಕ್ಕರ್ ಹಾಜಿ ಬೆಳ್ಳಾರೆ, ಯೂಸುಫ್ ಹಾಜಿ ಕೈಕಾರ, ಇಬ್ರಾಹಿಂ ಮಂಡೆಕೈ, ಅಬ್ಬಾಸ್ ಮದನಿ ಪುತ್ತೂರು, ಇರ್ಶಾದ್ ಫೈಝಿ ಮುಕ್ವೆ, ಜಮಾಲುದ್ದೀನ್ ಹಾಜಿ, ಅಬೂಬಕ್ಕರ್ ಮುಸ್ಲಿಯಾರ್, ಪಿ.ಕೆ. ಮುಹಮ್ಮದ್, ಪತ್ರಕರ್ತ ಯೂಸೂಫ್ ರೆಂಜಲಾಡಿ, ಉಮರ್ ರೆಂಜಲಾಡಿ, ಶಾಫಿ ಇಂಜಿನಿಯರ್ ಪಾಪೆತ್ತಡ್ಕ, ಇಬ್ರಾಹಿಂ ಬಾತಿಷಾ ಹಾಜಿ ಪಾಟ್ರಕೋಡಿ ಉಪಸ್ಥಿತರಿದ್ದರು.

ಈ ಸಂದರ್ಭ ನಂದಿ ದಾರುಸ್ಸಲಾಂ ಅರಬಿಕ್ ಕಾಲೇಜ್‌ನಲ್ಲಿ ದೀರ್ಘ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಉಸ್ತಾದ್ ಕೆ.ಟಿ..ಅಬ್ದುಲ್ಲಾ ಫೈಝಿ ವೆಳ್ಳಿಮುಕ್ಕು ಅವರನ್ನು ದ.ಕ.ಜಿಲ್ಲಾ ದಾರಿಮೀಸ್ ಅಸೋಸಿಯೇಶನ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News