×
Ad

ಗಾಂಜಾ ಸೇವನೆ ಆರೋಪ: ಯುವಕ ಸೆರೆ

Update: 2025-06-26 20:47 IST

ಮಂಗಳೂರು, ಜೂ.26: ದೇರೆಬೈಲು ಲ್ಯಾಂಡ್ ಲಿಂಕ್ಸ್ ಟೌನ್‌ಶಿಪ್ ನಿವಾಸಿ ಉದಿತ್ (26) ಎಂಬಾತನನ್ನು ಗಾಂಜಾ ಸೇವಿಸಿದ ಆರೋಪದ ಮೇರೆಗೆ ಬರ್ಕೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಲೇಡಿಹಿಲ್ ಬಳಿ ಅಮಲಿನಲ್ಲಿ ತೂರಾಡುತ್ತಾ ನಡೆದುಕೊಂಡು ಹೋಗುತ್ತಿದ್ದ ಈತನನ್ನು ಪೊಲೀಸರು ತಡೆದು ವಿಚಾರಣೆ ನಡೆಸಿದ ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಆವಾಗ ಗಾಂಜಾ ಸೇವನೆ ದೃಢಪಟ್ಟಿದ್ದು, ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News