×
Ad

ಸಂವಿಧಾನ ಕಡೆಗಣನೆಯಿಂದಾಗಿ ದೇಶದಲ್ಲಿ ಕೋಮು ಗಲಭೆಗಳ ಹೆಚ್ಚಳ: ಅನಿಲ್ ಚೆರಿಯನ್‌

Update: 2025-06-27 20:15 IST

ಸುರತ್ಕಲ್: ಡಿವೈಎಫ್‌ಐ ಸುರತ್ಕಲ್ ವತಿಯಿಂದ “ತುಳುನಾಡಿನ ಸಾಮರಸ್ಯದ ಪರಂಪರೆಯ ಉಳಿವಿಗಾಗಿ, ಕರಾವಳಿಯ ಕೋಮು ಸೌಹಾರ್ದದ ರಕ್ಷಣೆಗಾಗಿ, ಜಾತಿ-ಮತ ಯಾವುದಾದರೇನು ಮನುಷ್ಯ ಒಳ್ಳೆಯವನಾಗಿದ್ದರೆ ಸಾಕು”ಎಂಬ ಸಂದೇಶ ಸಾರುವ ಸೌಹಾರ್ದ ಯುವ ಸಮ್ಮಿಲನ ಕಾರ್ಯಕ್ರಮವು ಕುಳಾಯಿ ಮಹಿಳಾ ಮಂಡಲದಲ್ಲಿ ಶುಕ್ರವಾರ ನಡೆಯಿತು.

ಕಾರ್ಯಕ್ರಮವನ್ನು ಹಳೆಯಂಗಡಿ ಸ.ಪ.ಪೂ. ಕಾಲೇಜಿನ ಉಪನ್ಯಾಸಕ ಅನಿಲ್ ಚೆರಿಯನ್‌ ಉದ್ಘಾಟಿಸಿ ದರು. ಬಳಿಕ ಮಾತನಾಡಿದ ಅವರು, ಜಾತಿ, ಧರ್ಮಗಳ ಹೆಸರಿನಲ್ಲಿ ದೇಶವನ್ನು ಭಾಗ ಮಾಡಲು ಹವಣಿ ಸುತ್ತಿರುವಾಗ ಡಿವೈಎಫ್ಐ ಸುರತ್ಕಲ್ ಈ ಕಾರ್ಯಕ್ರಮದ ಮೂಲಕ ಒಗ್ಗೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಭಾರತದಲ್ಲಿ ಸಂವಿಧಾನ ಎಲ್ಲದಕ್ಕಿಂತಲೂ ಮಿಗಿಲಾದ ಸ್ಥಾನವನ್ನು ಪಡೆಯಬೇಕಿತ್ತು ಆದರೆ ಪ್ರಸ್ತುತ ಸಂವಿಧಾನವು ಜಾತಿ ಧರ್ಮಗಳಿಗಿಂತ ಕೀಳಾಗಿ ನೋಡಲಾಗುತ್ತಿದೆ ಇದರ ಪರಿಣಾಮ ದೇಶದಲ್ಲಿ ಕೋಮು ಕಲಬೆಗಳಂತಹ ಘಟನೆಗಳು ನಡೆಯುತ್ತಿವೆ ಎಂದರು.

ಭಾರತ ಪ್ರಜಾಪ್ರಭುತ್ವ ದೇಶವಾಗಿದ್ದರು ಅದು ರಾಜಕೀಯಕಷ್ಟೇ ಸೀಮಿತವಾಗಿದೆ. ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಪ್ರಜಾಪ್ರಭುತ್ವ ಇಲ್ಲದಾಗಿದೆ. ಹಾಗಾಗಿ ದೇಶದಲ್ಲಿ ಜಾತಿ ಧರ್ಮಗಳನ್ನು ಮುಂದಿಟ್ಟು, ಗಲಭೆಗಳನ್ನು ನಡೆಸಲಾಗುತ್ತಿದೆ. ಜನರ ತಲೆಗೆ ವಿವೇಕ ವಿವೇಚನೆಯ ಬದಲಿಗೆ ಧರ್ಮ ಎಂಬ ವಿಷಯ ವನ್ನು ತುಂಬಲಾಗುತ್ತಿದೆ. ಇದನ್ನು ಸಾಂಸ್ಕೃತಿಕವಾಗಿ ಇಲ್ಲದಾಗಿಸಲು ವಿವಿಧ ಪ್ರಕಾರದ ಕಾರ್ಯಕ್ರಮಗಳ ಮೂಲಕ ಯುವ ಸಮುದಾಯಕ್ಕೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಚರಿಯನ್ ನುಡಿದರು.

ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ಧರ್ಮ‌ ಮತ್ತು ರಾಜಕೀಯ ಒಂದಾದಾಗ ಧರ್ಮ ಸಂಘರ್ಷಗಳು ಉಂಟಾಗುತ್ತವೆ. ಇದೇ ಪರಿಸ್ಥಿತಿ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಹಾಗಾಗಿ ಮಂಗಳೂರಿನಲ್ಲಿ ಬದುಕುವುದು ಅಸಾಧ್ಯ ಎಂದ ಅವರು ಮಂಗಳೂರು ಸುರಕ್ಷಿತವಲ್ಲ ಎಂದು ಆತಂಕ‌ ವ್ಯಕ್ತಪಡಿಸಿದರು.

ಕೋಮು ಗಲಭೆಗಳಂತಹ ಘಟನೆಗಳು ಸಂಭವಿಸಿದಾಗ ಸಾರ್ವಜನಿಕರು ಮೌನವಾಗಿದ್ದು ಅಪರಾಧ ಕೃತ್ಯಗಳಿಗೆ ಕುಮ್ಮಕ್ಕು ನೀಡುವ ಬದಲು ಪ್ರಶ್ನಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಹೀಗಾದರೆ ಮಾತ್ರ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.

ಡಿವೈಎಫ್‌ಐ ದ.ಕ.‌ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮಾತನಾಡಿ, ಮಂಗಳೂರು 7 ಗಂಟೆಗೆ ಸಂಫೂರ್ಣ ಸ್ತಬ್ದ ವಾಗುತ್ತಿದೆ.‌ ಕತ್ತಲಾಗುತ್ತಲೇ ಮನೆ ಸೇರುವ ಪರಿಸ್ಥಿತಿ ಇದೆ. ಈ ಪರಿಸ್ಥಿತಿಯನ್ನು ಸರಿಪಡಿಸುವ ಕೆಲಸ‌ ಆಗಬೇಕು.‌ ರಾಜಕೀಯ ಲಾಭಕ್ಕಾಗಿ ನಮ್ಮ ನಂಬಿಕೆಗಳು ಸೌಹಾರ್ದ ಬದುಕನ್ನು ಹೊಡೆದು ಹಾಕಲಾಗುತ್ತಿದೆ. ಯಾವುದೇ ವೈಯಕ್ತಿಕ ದ್ವೇಷ ಇಲ್ಲದೆ ಇದ್ದರೂ ರಾಜಕೀಯ ದುರುದ್ದೇಶಕ್ಕಾಗಿ ನಾಥೂರಾಮ್‌ ಗೋಡ್ಸೆ ಗಾಂಧಿಯನ್ನು ಕೊಲೆಗೈದಂತೆ ಅಬ್ದುಲ್ ರಹಿಮಾನ್ ನನ್ನೂ ಅದೇ ಕಾರಣಕ್ಕಾಗಿ ಕೊಲೆಗೈಯ್ಯಲಾಗಿದೆ ಎಂದರು.

ಉದ್ಯೋಗ, ಆರೋಗ್ಯ ಸಮಸ್ಯೆ‌, ಶಿಕ್ಷಣ ವ್ಯಾಪಾರೀಕರಣಗಳು ನಡೆಯುತ್ತಿದ್ದರೆ, ಅಸನ್ನು ಪ್ರಶ್ನಿಸಬೇಕಾಗಿ ರುವ ಯುವಕರನ್ನು ಧರ್ಮದ ಹೆಸರಿನಲ್ಲಿ ದಾರಿ ತಪ್ಪಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲಾಗುತ್ತಿದೆ‌ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದರು.

ಇದೇ ಸಂದರ್ಭ ಸೌಹಾರ್ದ ಸಾರುವ ಪೋಸ್ಟರ್ ಗಳನ್ನು ಅತಿಥಿಗಳು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಕಾರ್ಮಿಕ‌ ಮುಖಂಡ ಸದಾಶಿವ ಶೆಟ್ಟಿ ಹೊಸಬೆಟ್ಟು, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಶ್‌ ಕುಮಾರ್ ಬಜಾಲ್, ವಕೀಲರು ಹಾಗೂ ಮೊಗವೀರ‌ ಸಮುದಾಯದ ಮುಖಂಡ ಗಂಗಾಧರ್‌ ಗುರಿಕಾರ್‌, ಸಾಮಾಜಿಕ ಹೋರಾಟಗಾರ ಟಿ.ಎನ್. ರಮೇಶ್ ಮೊದಲಾದವರು ಮಾತನಾಡಿದರು.

ಮಾಜಿ ಕಾರ್ಪೊರೇಟರ್ ಅಯಾಝ್ ಕೃಷ್ಣಾಪುರ, ಸಿಪಿಎಂ ಮುಖಂಡ ಮುನೀರ್ ಕಾಟಿಪಳ್ಳ, ಡಿವೈಎಫ್ ಐ ಮುಖಂಡರಾಗ ಆಶಾ ಬೈಕಂಪಾಡಿ, ರಾಜೇಶ್‌ ಕುಳಾಯಿ, ಕೊರಗ ಸಮುದಾಯದ ಮುಖಂಡರಾದ ಜಯ ಮಧ್ಯ ಸಲೀಮ್ ಶಾಡೊ ಶರೀಫ್ ಜನತಾ ಕಾಲನಿ, ಡಿವೈಎಫ್ಐ ಸುರತ್ಕಲ್ ವಲಯಾಧ್ಯಕ್ಷ ಬಿ.ಕೆ. ಮಕ್ಸೂದ್ ಮೊದಲಾದವರಿದ್ದರು.

ಪಕ್ಷ, ಧರ್ಮಕ್ಕಾಗಿ ಸಾಯಲು ಬಡವರ‌ ಮಕ್ಕಳ ಬಳಕೆ: ಪ್ರತಿಭಾ ಆಕ್ರೋಶ

ಸದಾಕಾಲ ಕೋಮ ಸೌಹಾರ್ದ ಕೆಡಿಸುವ ಭಾಷಣಗಳನ್ನು ಮಾಡುತ್ತಿರುವ ಶಾಸಕರಾದ ಭರತ್ ಶೆಟ್ಟಿ ಮತ್ತು ವೇದವ್ಯಾಸ ಕಾಮತ್ ಅವರನ್ನು ಇಂತಹ ಸೌಹಾರ್ದ ಬಿತ್ತು ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕು. ರಾಜಕಾರಣಿಗಳ ಮಕ್ಕಳು ಹೊರದೇಶದಲ್ಲಿ ಕಲಿಯುತ್ತಿದ್ದರೆ ಪಕ್ಷ, ಧರ್ಮಕ್ಕಾಗಿ ಸಾಯಲು ಬಡವರ‌ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ‌ ಎಂದು ಪ್ರತಿಭಾ ಕುಳಾಯಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಬ್ಯಾರಿ ಸಮುದಾಯದ ಸಾಂಸ್ಕೃತಿ ಹಿಂದೂ ಧರ್ಮದ ಆಚರಣೆಗಳೊಂದಿಗೆ‌ ಮಿಳಿತವಾಗಿದೆ. ದೇಶದಲ್ಲಿ ಆಚರಣೆಗಳನ್ನು ವಿರೋಧಿಸುವ ಕೆಲಸವಾಗುತ್ತಿದೆ. ಹೊರತು ನಿವಾರಣೆಗೆ ಮುಂದಾಗಿಲ್ಲ. ನಾವು ಉಳಿಯ ಬೇಕಿದ್ದರೆ ದೇಶ ಉಳಿಯ ಬೇಕಿದೆ. ಇದೇ ರೀತಿಯ ಪರಿಸ್ಥಿತಿ‌ಮುಂದುವರಿದೆ ಜನರು‌ ದೇಶದ ಜನರ‌ ಜೀವನ, ಆರ್ಥಿಕತೆ ದುಸ್ತರವಾಗಲಿದೆ".

-ಅನಿಲ್ ಚೆರಿಯನ್, ಉಪನ್ಯಾಸಕರು ಸ.ಪ.ಪೂ.‌ಕಾಲೇಜು







Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News